March 29, 2023 9:05 pm

ಸಾಹುಕಾರಿಕೆ ಎಂದರೆ…

ಸಾಹುಕಾರಿಕೆ ಎಂದರೆ ಸರಳತೆ ಸೌಜನ್ಯ ಕಾರುಣ್ಯ ಪೂರ್ಣದೃಷ್ಠಿ ಮನುಷ್ಯಪ್ರೇಮ ಎಂಬುದನ್ನು ಸತೀಶ್ ಜಾರಕಿಹೊಳಿ ಅವರನ್ನು ಹತ್ತಿರದಿಂದ ನೋಡಿದ ಯಾರಿಗಾದರೂ ಅನ್ನಿಸದೇ ಇರದು. ಆ ಕಾರಣಕ್ಕಾಗಿಯೇ ಬೆಳಗಾವಿಯ ಜನತೆ ಜಾತಿ ಭೇದ ಬದಿಗಿಟ್ಟು ಮತಹಾಕಿದ್ದಾರೆ. ಚುನಾವಣೆ ಇರಲಿ ಇಲ್ಲದಿರಲಿ ತನ್ನನ್ನು ಯಾರೆಷ್ಟೇ ಕಟುವಾಗಿ ಟೀಕಿಸಲಿ ಅವಮಾನಕರವಾಗಿ ಮಾತನಾಡಲಿ ಎಲ್ಲರಿಗೂ ಶಾಂತಿಯಿಂದಲೇ ವಿವೇಕಯುತವಾದ ಪ್ರತಿಕ್ರಿಯೆಯನ್ನು ಸಭ್ಯತೆಯ ಎಲ್ಲೆ ಮೀರದೆ ಕೊಡುತ್ತಾರೆ. ಮೌಢ್ಯದ ವಿರುದ್ಧದ ಹೋರಾಟ ಸಮಾನತೆಗಾಗಿ ಹೋರಾಟ ಯಾವುದೇ ಬಗೆಯ ದೌರ್ಜನ್ಯಗಳ ವಿರುದ್ಧ “ಮಾನವಬಂಧುತ್ವ ವೇದಿಕೆ” ಕಟ್ಟಿ ಅದನ್ನು ನಿರಂತರವಾಗಿ ಬೆಳೆಯಿಸಿ ಇವನಾರವ ಇವನಾರವ ಎಂದೆಣಿಸದೆ ಎಲ್ಲರನ್ನೂ ನಮ್ಮವರೆಂದು ಬಂಧುತ್ವವನ್ನು ಬೆಸೆಯುತ್ತಿರುವ ಈ ಕಾಲದ ವಿಶೇಷ ನಾಯಕ.

ರಾಜಕಾರಣ ಲಾಭದ ಸರಕಾಗಿರುವ ಈ ಕಾಲಘಟ್ಟದಲ್ಲಿ, ಪುರೋಹಿತಶಾಹಿ ಬಲಪಂಥೀಯ ಕೋಮುವಾದೀ ಜಾತಿವಾದಿ ಕ್ರಿಮಿಗಳು ಎಲ್ಲೆಡೆ ತುಂಬಿಕೊಂಡು ರಾಜಕೀಯ ಮೌಲ್ಯಗಳೇ ಕುಸಿದುಬಿದ್ದಿರುವ ಈ ಕಾಲಘಟ್ಟದಲ್ಲಿ ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯ ಇಂತವರದ್ದೆಲ್ಲಾ ಏಕಾಂಗಿಹೋರಾಟ. ಮತ್ತೂ ಪ್ರವಾಹದ ವಿರುದ್ಧವೇ ಸೆಣೆಸುವ ಪ್ರವಾಹದಲ್ಲಿ ತನ್ನವರು ತೇಲಿ ಹೋಗಬಾರದು ಕೊಚ್ಚಿಹೋಗಬಾರದು ಎಂದು ರಕ್ಷಣೆಗೆ ನಿಲ್ಲುವ ಅಸಾಧಾರಣ ಸಾಹಸೀ ಹೋರಾಟ.

ಸತೀಶ್ ಜಾರಕಿಹೊಳಿಯವರು ಎಲ್ಲ ವೈಟ್ ಸ್ಕಾಲರ್ ರಾಜಕಾರಣಿಗಳಂತೆ ತಾವೂ ಒಂದು ಸ್ಟಾಂಡರ್ಡ್ ಮೇಂಟೇನ್ ಮಾಡಬಹುದಿತ್ತು. ಆ ಎಲ್ಲಾ ಅವಕಾಶಗಳೂ ಅವರಿಗಿವೆ. ಆದರೆ ತನ್ನ ಕಣ್ಣಮುಂದೆ ಏನೂ ಇಲ್ಲದ ಜನರಿದ್ದಾರಲ್ಲ ತಾನೂ ಅವರಂತೆಯೇ ಅವರೊಟ್ಟಿಗೇ ಅವರಿಗೆ ಅಣಕಿಸದ ಹಾಗೆ ಅವರ ಬಡತನ ದಾರಿದ್ರ್ಯ ಸ್ಥಿತಿಗಳನ್ನು ಅಣಕಿಸದ ಹಾಗಿರಬೇಕು. ಅಂತಿಮವಾಗಿ ಮನುಷ್ಯ ಸರಳವಾಗಿ ಎಲ್ಲರವನಾಗಿ ಬದುಕಿ ಹೋಗಬೇಕೆಂಬ ಸಿದ್ಧಾಂತಕ್ಕೆ ಅದೂ ಹುಟ್ಟುಸಹಜವಾಗಿ ಬಂದ ಗುಣಕ್ಕೆ ಎರವಾಗದೆ ಸಾಗುತ್ತಿದ್ದಾರೆ. ಚುನಾವಣೆ ಎಂದರೆ ಅವರಿಗೆ ಅದೊಂದು ಮಹಾತಂತ್ರ ಕುತಂತ್ರಗಳ ಆರೋಪ ಪ್ರತ್ಯಾರೋಪಗಳ ಜಿದ್ದಾಜಿದ್ದಿನ ಹಗೆತನ ಸಾಧಿಸುವ ಸಾಧನವಲ್ಲ; ಅದೊಂದು ಜನಸೇವೆ ಮಾಡಲು ಸಂವಿಧಾನಬದ್ಧವಾಗಿ ಅವರ ಕೆಲಸ ಮಾಡಲು ಬೇಕಾಗಿರುವ ಒಂದು ಅವಶ್ಯಕತೆ‌.

ಚುನಾವಣೆ ಗೆದ್ದವರಿಗೆ ಸಿಗುವುದು ‘ಅಧಿಕಾರ’ವಲ್ಲ ಅವಕಾಶ. ಆ ಅವಕಾಶ ವಯಕ್ತಿಕಕ್ಕಲ್ಲ ಜನತೆಗೆ ಸಮಾಜಕ್ಕೆ ದೇಶಕ್ಕೆ ವಿನಿಯೋಗಿಸಲು ಈ ವಿಚಾರದಲ್ಲಿ ನಂಬಿ ಇಟ್ಟುಕೊಂಡ ನಾಯಕ ಸದ್ಯಕ್ಕೆ ಸಿಗುವುದು ಸತೀಶ್ ಜಾರಕಿಹೊಳಿ. 

ಒಂದೆಡೆ ನಮ್ಮ ಕ್ಷೇತ್ರವನ್ನು ಬಿಟ್ಟುಹೋಗಬೇಡಿ ಎಂದು ಒತ್ತಾಯಿಸುತ್ತಿದ್ದ ಯಮಕನಮರಡಿಯ ಜನತೆ, ಮತ್ತೊಂದೆಡೆ “ಸತ್ಯಪ್ಪ ಸೌಕಾರ್ರಿಗೆ ಓಟ್ ಹಾಕೋಕೆ ನಮಗೊಂದು ಅವ್ಕಾಶ ಸಿಕ್ಕಿದೆ” ಎಂದು ಅಭಿಮಾನದಿಂದ ಸ್ವಾಗತಿಸುತ್ತಿದ್ದ ಜನ. ಇವರಿಬ್ಬರ ಪ್ರೀತಿ ಅಭಿಮಾನದಲ್ಲಿ ನಾಯಕ ಯಾರೆಡೆಗೆ ಬಾಗಬೇಕು ಎಂದು ಯೋಚಿಸುವುದು ಕಷ್ಟವಾಗಿಬಿಡುತ್ತದೆ.

ಆದರೂ ಒಂದು ಪಕ್ಷ ಅದಕ್ಕೊಂದು ವ್ಯವಸ್ಥೆ ಇರುತ್ತದೆ. ಪಕ್ಷದ ಸದಸ್ಯರು ಅದರ ಮಾತು ಕೇಳಬೇಕಾಗುತ್ತದೆ‌. ಪಕ್ಷದ ಹೈಕಮಾಂಡ್ ಮತ್ತು ನಾಯಕರ ಒತ್ತಡಕ್ಕೆ ಮಣಿದು ಬೆಳಗಾವಿ ಲೋಕಸಭಾ ಚುನಾವಣೆಗೆ ಸ್ಫರ್ಧಿಸಿ, ನಿರೀಕ್ಷಿಸಿದಂತೆ ಬಲವಾದ ಪೈಪೋಟಿ ನೀಡಿ ಅಲ್ಪದರಲ್ಲಿ ಪರಾಜಿತರಾಗಿದ್ದಾರೆ‌. ಅಸಲಿಗೆ ಇದು ಪರಾಜಯವೇ ಅಲ್ಲ. ಸತೀಶ್ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ತುಳಿಯಲು ಹೂಡಿರುವ ಷಡ್ಯಂತ್ರ ಎನ್ನುವ ಮಾತು ಹರಿದಾಡುತ್ತಿತ್ತು. ಅದು ಸತ್ಯವೇ ಆಗಿದ್ದರೆ ಷಡ್ಯಂತ್ರ ಹೂಡಿದ್ದವರಿಗೆ ಸೋಲಾಗಿದೆ. ಹಾಗೂ ಪಕ್ಷದಲ್ಲಿ ಸತೀಶ್ ಜಾರಕಿಹೊಳಿಯವರ ಶಕ್ತಿ ಏನೆಂಬುದು ಸಾಬೀತಾಗಿದೆ. ಎದುರು ಪಕ್ಷದವರ ಅಪಪ್ರಚಾರ ಸೋತಿದೆ‌. ಜನ ದಶಕಗಳ ಕಾಲ ಕಂಡ ಮನುಷ್ಯನ ಅಂತರಂಗಕ್ಕೆ ಸೋತು ಮತಹಾಕಿದ್ದಾರೆ. ಬಿಜೆಪಿ ಗೆದ್ದರೂ ಬೆದರುವಂತಾಗಿದೆ. ಅವರಿಗೆ ಗೆದ್ದರೂ ಇದು ಸೋಲೇ‌…

– ಸುರೇಶ ಎನ್ ಶಿಕಾರಿಪುರ, ಬಹುಮುಖಿ ಚಿಂತಕರು

Share:

Leave a Reply

Your email address will not be published. Required fields are marked *

More Posts

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ

On Key

Related Posts

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಭಕ್ತಿ ಪಂಥ ‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ