ಚಿತ್ರದುರ್ಗ: ಒಳ್ಳೆಯ ಸರ್ಕಾರ ಅಧಿಕಾರದಲ್ಲಿದ್ದರೆ ಯಾವುದೇ ಚಿಂತೆಯಿಲ್ಲ. ಇಂದು ಬ್ಯಾಂಕ್ ನಲ್ಲಿ ಇಟ್ಟಿರುವ ಹಣಕ್ಕೆ ಖಾತ್ರಿ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಚಿಂತಕ ರುದ್ರಪ್ಪ ಹನಗವಾಡಿ ಹೇಳಿದರು.
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಬಂಧುತ್ವ ಅಧಿವೇಶನದ ಸಮಾರೋಪ ಸಮಾರಂಭಧಲ್ಲಿ ಮಾತಾಡಿದ ಅವರು, ಮ್ಯಾಗ್ಸೆಸೆ ವಿಜೇತ ಟಿ.ಎಂ.ಕೃಷ್ಣ ಅನ್ಯಾಯ ವಿರುದ್ಧ ಪ್ರತಿಭಟಿಸಿದ್ದಕ್ಕೆ ಅವಕಾಶಗಳನ್ನು ನಿರಾಕರಿಸಲಾಯಿತು ಎಂದರು.
ಇಷ್ಟು ದಿನ ಬೀದಿಯಲ್ಲಿದ್ದವರು ಇಂದು ನಮ್ಮ ಮನೆಯೊಳಗೆ ಬಂದಿದ್ದಾರೆ. ಇನ್ನು ಮುಂದೆ ಕೂಡ ನಾವು ಸುಮ್ಮನಿದ್ದರೆ ನಾವು ಷಂಡರು. ಅನ್ಯಾಯನ್ನು ಸಹಿಸಬಾರದು. ಕಲಾವಿದರು, ಲೇಖಕರು, ಸಂಗೀತಗಾರರನ್ನು ಸೇರಿಸಿಕೊಂಡು ನಾವು ಮುನ್ನಡೆಯಬೇಕಿದೆ. ಇಲ್ಲವಾದರೆ ನಮ್ಮ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಡುತ್ತಾರೆ ಎಂದರು.