April 25, 2024 11:33 pm

ಭಾರತದ ಪ್ರಜಾಪ್ರಭುತ್ವಕ್ಕೆ ನೆಹರೂ ಅವರ ಕೊಡುಗೆಗಳು: ಶಶಿಧರ ಭಟ್

ಬೆಂಗಳೂರು: 1889ರಲ್ಲಿ ಅಲಹಾದಿನಲ್ಲಿ ಜನಸಿಸಿದ ನೆಹರೂ ಕೆಲ ವರ್ಷ ಮನೆಯಲ್ಲಿಯೇ ಅಧ್ಯಯನ ಮಾಡಿ ನಂತರ ವಿದೇಶಕ್ಕೆ ಹೋಗಿ 1912ರಲ್ಲಿ ಭಾರತಕ್ಕೆ ಮರಳುತ್ತಾರೆ ಎಂದು ಹಿರಿಯ ಪತ್ರಕರ್ತ ಶಶಿಧರ್ ಭಟ್ ಹೇಳಿದರು.

ಮಾನವ ಬಂಧುತ್ವ ವೇದಿಕೆ ವತಿಯಿಂದ ಆಗಸ್ಟ್ 21, 2021ರಂದು ಆಯೋಜಿಸಲಾಗಿದ್ದ ಬಂಧುತ್ವ ಬೆಳಕು ಉಪನ್ಯಾಸ ಮಾಲಿಕೆಯ ವೆಬಿನಾರ್ ಸರಣಿಯಲ್ಲಿ “ಭಾರತದ ಪ್ರಜಾಪ್ರಭುತ್ವಕ್ಕೆ ಜವಾಹರಲಾಲ್ ನೆಹರು ಅವರ ಕೊಡುಗೆಗಳು” ವಿಷಯದ ಕುರಿತು ಹಿರಿಯ ಪತ್ರಕರ್ತ ಶಶಿಧರ್ ಭಟ್ ಉಪನ್ಯಾಸ ನೀಡಿದರು. ವೆಬಿನಾರ್ ನಲ್ಲಿ ಹಿರಿಯ ವಕೀಲ ಕೆ.ದಿವಾಕರ್, ಎಐಸಿಸಿ ವಕ್ತಾರೆ ಲಾವಣ್ಯ ಬಲ್ಲಾಳ್, ಕೆಪಿಸಿಸಿ ವಕ್ತಾರ ಮಂಜುನಾಥ್ ಅದ್ದೆ ಪ್ರತಿಕ್ರಿಯೆ ನೀಡಿದರು. ‌

ವೆಬಿನಾರ್ ನಲ್ಲಿ ವಿಷಯ ಮಂಡಿಸಿದ ಶಶಿಧರ್ ಭಟ್, ಕೆಲ ಕಾಲ ವಕೀಲಿ ವೃತ್ತಿ ಮಾಡಿ ಕಾಂಗ್ರೆಸ್ಸಿನ ರಾಜಕಾರಣಕ್ಕೆ ಧುಮುಕಿ 1930ರಲ್ಲಿ ಸಾಕಷ್ಟು ಹೆಸರು ಮಾಡಿರುತ್ತಾರೆ. ಆ ಹೊತ್ತಿಗೆ ಗಾಂಧೀಜಿ ಈ ಯುವಕನಲ್ಲಿ ಏನೋ ಇದೆ ಎಂದರಿತ ಎಡಪಂಥೀಯ ವಿಚಾರಧಾರೆಗಳ ಯುವಕರನ್ನು ಸೆಳೆಯಲು ಉತ್ತರವಾಗಿ ಜವಾಹರಲಾಲ ನೆಹರೂ ಕಾಣುತ್ತಾರೆ. ಗಾಂಧೀಜಿ ಹೇಳುತ್ತಾರೆ, ‘ಜವಾಹಾರ ಅಪ್ಪಟ ಭಾರತೀಯ ಆದರೆ ಅವರ ದೃಷ್ಟಿ ಲೋಕದೃಷ್ಟಿ, ಅಂತರಾಷ್ಟ್ರೀಯ ದೃಷ್ಟಿ, ನನ್ನ ಭಾರತದ ಕನಸನ್ನು ಜವಾಹಾರ ಈಡೇರಿಸುತ್ತಾರೆ’ಎಂದರು.

ಆ ಸಂದರ್ಭದಲ್ಲಿಲಯೇ ನೆಹರೂ ಭಾರತದ ಪ್ರಧಾನ ಮಂತ್ರಿಯಾಗುತ್ತಾರೆ. ಆದರೆ ಅದು 1942ರ ಹೊತ್ತಿಗೆ ಘೋಷಣೆಯಾಗುತ್ತದೆ. ಗಾಂಧಿ ಮತ್ತು ನೆಹರೂ ಅವರ ಸಂಬಂಧ ಬಹಳ ಅದ್ಭುತವಾಗಿತ್ತು. ಗಾಂಧಿ ಅವರ ವಿಚಾರಧಾರೆ ಭಾರತದ ಸಾಂಪ್ರದಾಯಿಕತೆಯ ಮೇಲಿತ್ತು. ಆದರೆ ಕೋಮುವಾದಿಯಾಗಿರಲಿಲ್ಲ ಎಂದರು.

ನೆಹರೂ ನಮಗೆ ಆಧುನಿಕ, ವೈಜ್ಞಾನಿಕ ಮನೋಭಾವನೆಯನ್ನು ಕೊಟ್ಟವರು. ನೆಹರೂ ಪ್ರಧಾನಿಯಾದ ಸಂದರ್ಭದಲ್ಲಿ ದೇಶದಲ್ಲಿ ಬಡತನ ತಾಂಡವಾಡುತ್ತಿತ್ತು, ಖಜಾನೆ ಖಾಲಿಯಾಗಿತ್ತು, ಆಹಾರ ಧಾನ್ಯಗಳ ಅಭಾವ ಕಾಡುತ್ತಿತ್ತು, ಅಭಿವೃದ್ಧಿ ಇರಲಿಲ್ಲ. ಹೀಗಿದ್ದಾಗ ಹಸಿರು ಕ್ರಾಂತಿ ಪ್ರಾರಂಭಿಸಿದರು, ಐಐಟಿ ಪ್ರಾರಂಭಿಸಿದರು, ಯೋಜನಾ ಆಯೋಗವೂ ಅವರದ್ದೇ ಕೊಡುಗೆ, ಅಣುಶಕ್ತಿ ಆಯೋಗವನ್ನು ಪ್ರಾರಂಭಿಸುತ್ತಾರೆ ಎಂದರು.

ರಾಜಕಾರಣ ಆರ್ಥಿಕತೆಯನ್ನು ನನಗೆ ಕಲಿಸಿತು. ಅದು ನನಗೆ ವೈಜ್ಞಾನಿಕ ಮನೋಧರ್ಮ ರೂಪಿಸಿತು ಎಂದಿದ್ದಾರೆ ನೆಹರೂ. ಲಾಹೋರ ಅಧಿವೇಶನದ ನಂತರ ನೆಹರೂ ಯುವಕರ ಕಣ್ಮಣಿಯಾಗಿ ರೂಪುಗೊಳ್ಳುತ್ತಾರೆ. ಈ ದೇಶವನ್ನು ಸೆಕ್ಯೂಲರ್ ತಲಹದಿಯಲ್ಲಿ ಕಟ್ಟುತ್ತಾರೆ. ಭಾರತದ ಕುರಿತು ಅವರಿಗೊಂದು ಒಳನೋಟವಿತ್ತು. ನೆಹರೂ ದೇವಸ್ಥಾನವನ್ನು ಕಟ್ಟದೇ ದೇಶವನ್ನು ಕಟ್ಟಿದರು. ದೇಶ ಇಂದಿರಾ ಗಾಂಧಿಯವರ ನಂತರ ನೆಹರೂ ಅವರನ್ನು ಮರೆಯುತ್ತಿದೆ. ನೆಹರೂ ಅವರ ಬಗ್ಗೆ ತಿಳಿಸುವ ಜನಾಂದೋಲವನ್ನು ಕಾಂಗ್ರೆಸ್ ಮಾಡಬೇಕಿದೆ ಎಂದು ಸಲಹೆ ನೀಡಿದರು.

ವೆಬಿನಾರ್ ನಲ್ಲಿ ಪ್ರತಿಕ್ರಿಯಿಸಿದ ಸಂಪನ್ಮೂಲ ವ್ಯಕ್ತಿಗಳ ಅಭಿಪ್ರಾಯ

ವಿಜ್ಞಾನದಿಂದ ಅಂತರಿಕ್ಷದವರೆಗೆ ತಳಸ್ಪರ್ಶಿಯಾದ ಸಂವೇದನೆ ಇದ್ದಂತಹ ಅಪರೂಪದ ವ್ಯಕ್ತಿ ನೆಹರೂ. ನೆಹರೂ ಅಲಿಪ್ತ ನೀತಿ ವಿಚಾರ ಜಗತ್ತಿಗೆ ತಿಳಿಸಬೇಕಾಗಿತ್ತು. ತನ್ನ ಎಲ್ಲ ಮಂತ್ರಿ ಮಂಡಲಕ್ಕೆ ಕೆಲಸ ಮಾಡಲು ಪೂರ್ಣ ಪ್ರಮಾಣದ ಸ್ವಾತಂತ್ರ್ಯ ನೀಡಿದ್ದವರು ನೆಹರೂ. ಚೈನಾ ವಾರ್ ಸಂದರ್ಭದಲ್ಲಿಯೂ ನೆಹರೂ ಅವರ ಬಗ್ಗೆ ಅಪಪ್ರಚಾರ ಪ್ರಾರಂಭವಾಗಿದೆ. 70 ವರ್ಷಗಳಲ್ಲಿ ಈ ದೇಶದ ಅಭಿವೃದ್ಧಿಗೆ ನೆಹರೂ ವಿಚಾರಧಾರೆ ಕಾರಣ. ಸಾಂಸ್ಥಿಕವಾಗಿ ಜನರಿಗೆ ನೆಹರೂ ಅವರನ್ನು ತಲುಪಿಸಲು ಕಾಂಗ್ರೆಸ್ ವಿಫಲವಾಗಿದೆ. ಕಳೆದ ವರ್ಷ ನೆಹರೂ ಅವರು ಬರೆದ ಪುಸ್ತಕಗಳ ರಾಯಲ್ಟಿ ಸುಮಾರು 7 ಕೋಟಿ.

  • ಕೆ. ದಿವಾಕರ, ಹಿರಿಯ ನ್ಯಾಯವಾದಿಗಳು, ವಿಶ್ಲೇಷಕರು

ನೆಹರೂ ಅವರ ಹೆಸರು ಕೆಡಿಸುವ ಪ್ರಯತ್ನಗಳು ಕಳೆದ ಹತ್ತು ವರ್ಷಗಳಿಂದಲೂ ನಡೆಯುತ್ತಿವೆ. ದೇಶದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ದೇಶದ ಅಡಿಪಾಯ ಹಾಕಿದವರು. ನೆಹರೂ ಅವರ ಬಗ್ಗೆ ನಾವು ಹೆಚ್ಚು ತಿಳಿದು, ಜನರಿಗೆ ತಿಳಿಸಬೇಕು. ಜಾತ್ಯತೀತ, ಪ್ರಜಾಸತ್ತಾತ್ಮಕ ಮೌಲ್ಯಗಳು ಇವತ್ತು ದೇಶದಲ್ಲಿ ಉಳಿದಿದ್ದರೆ ಅದಕ್ಕೆ ನೆಹರೂ ಅವರೇ ಕಾರಣ.

  • ಲಾವಣ್ಯ ಬಲ್ಲಾಳ, ಎಐಸಿಸಿ ವಕ್ತಾರೆ

ಸಂವಿಧಾನದಲ್ಲಿದ್ದ ಮೌಲ್ಯಗಳನ್ನು ದೇಶದಲ್ಲಿ ಬಿತ್ತುವ ಕೆಲಸ ಮಾಡಿದವರು ನೆಹರೂ. ಆರ್ ಎಸ್ ಎಸ್ ವೈದಿಕ ಮನಸ್ಥಿತಿಗೆ ವಿರುದ್ಧವಾಗಿ ನೆಹರೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕೊಟ್ಟರು. ಅಹಿಂಸಾ ನೀತಿಯನ್ನು ವಿಶ್ವದಲ್ಲಿಯೇ ಮೊದಲಿಗೆ ನೀಡಿದವರು ಗಾಂಧಿ. ನೂರಾರು ದೇಶಗಳು ಅದಕ್ಕೆ ಸ್ಪಂದಿಸುತ್ತವೆ. ನೆಹರೂ ದೊಡ್ಡ ಮಾನವೀಯ ಅಂಶಗಳನ್ನು ಕಾರ್ಯರೂಪಕ್ಕೆ ತಂದ ಪ್ರಧಾನಿಯಾಗಿದ್ದರು. ಹಸಿರು ಕ್ರಾಂತಿಯ ಮೂಲಕ ನೀರಾವರಿ ವ್ಯವಸ್ಥೆ ಕಟ್ಟಿ ಹಸಿವು ಮುಕ್ತವಾಗಿಸಿದರು. 40 ಲಕ್ಷ ಕಿ.ಮೀ ರಸ್ತೆ ನಿರ್ಮಾಣ ಮಾಡಿದರು. ಶೇ 14 ರಿಂದ ಇವತ್ತು ಶೇ 74ರಷ್ಟು ಸಾಕ್ಷರತೆಯನ್ನು ಸಾಧಿಸಿದ್ದರೆ ಅದಕ್ಕೆ ಕಾರಣ ನೆಹರೂ. ಜಾತ್ಯತೀತ, ವೈಜ್ಞಾನಿಕ, ದೂರದೃಷ್ಟಿ ಉಳ್ಳ ನಾಯಕ ನೆಹರೂ.

  • ಮಂಜುನಾಥ ಅದ್ದೆ, ಕೆಪಿಸಿಸಿ ವಕ್ತಾರ

Share:

Leave a Reply

Your email address will not be published. Required fields are marked *

More Posts

On Key

Related Posts

ಗಾಂಧಿ – ಅಂಬೇಡ್ಕರ್ ಜುಗಲ್ಬಂದಿ 

[ 8.1.2024 ರಂದು ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರೊಂದಿಗೆ ನಡೆದ “ಗಾಂಧಿ-ಅಂಬೇಡ್ಕರ್ ಪ್ರಸ್ತುತತೆ” ಮಾತುಕತೆಯ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ವಿಸ್ತೃತ ಅಕ್ಷರ ರೂಪ]  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರನ್ನು

ನ್ಯಾಯಾಂಗದ ವಿಸ್ತರಣೆ ಮತ್ತು ಸಾಧನೆ

ಸಮಾಜದ ಜನರ ನಡುವೆ ಬೆಳೆದು ಬರುವ ವ್ಯಾಜ್ಯಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು. ಶಾಂತಿ ಇರುವೆಡೆಯಲ್ಲಿ ಅಭಿವೃದ್ಧಿ ಇರುತ್ತದೆ. ಜನರಿಗೆ ನ್ಯಾಯ ಸಿಕ್ಕಿದರೆ ತೃಪ್ತಿಪಡುತ್ತಾರೆ. ನ್ಯಾಯ ದೊರಕಿಸಿಕೊಳ್ಳುವಲ್ಲಿ ಸೋತರೆ ಅನ್ಯ ಮಾರ್ಗಗಳನ್ನು ಅನುಸರಿಸುತ್ತಾರೆ. ಮುಂದುವರೆದು ದಂಗೆಯೇಳುತ್ತಾರೆ. ಯಾವುದೇ ರೀತಿಯ ಭೇದಭಾವವಿಲ್ಲದೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ

ಮಂಡ್ಯದ ಜನತೆಗೆ ಕರಾವಳಿಯ ಬಂಧುವೊಬ್ಬ ಬರೆದ ಪತ್ರ

ಮಂಗಳೂರಿನಿಂದ ಶ್ರೀ ಎಂ. ಜಿ. ಹೆಗಡೆ ಯವರು ನಮಗೆ, ಅಂದರೆ ಮಂಡ್ಯ ಜಿಲ್ಲೆಯವರಿಗೆ ತಮ್ಮ ಅನುಭವದ ಹಿನ್ನೆಲೆಯಲ್ಲಿ ಬರೆದ ಪತ್ರ ಇಲ್ಲಿದೆ. ದಯಮಾಡಿ ಶಾಂತಚಿತ್ತರಾಗಿ ಓದಿ. ಯಾರದೋ ದಾಳಕ್ಕೆ ನಮ್ಮ ನಿಮ್ಮ ಮಕ್ಕಳು ಬಲಿಯಾಗುವುದು ಬೇಡ. ವಿವೇಕದಿಂದ  ವರ್ತಿಸೋಣ. ಸಕ್ಕರೆ ನಾಡಿನ

ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು

1987ರಲ್ಲಿ ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು. ಅದರಲ್ಲೂ ಆ ಕೃತಿಯ ‘ರಾಮ-ಕೃಷ್ಣರ ಒಗಟುಗಳು’ ಭಾಗ. ಮಹಾರಾಷ್ಟ್ರದಲ್ಲಂತೂ 1988ರ ಜನವರಿಯಲ್ಲಿ ಆ ಕೃತಿಯನ್ನೇ ಸುಟ್ಟು ಹಾಕಿದ್ದರು. ಆ ಸಂದರ್ಭದಲ್ಲಿ ಕನ್ನಡದ ಓದುಗರಿಗೂ ಆ ಕೃತಿ

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹೇಳಿರುವ Educate, Unite ಮತ್ತು Agitate ಪದಗಳ ಅರ್ಥವೇನು?

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕುರಿತು ಮಾತನಾಡುವ ಬಹುತೇಕರು ಅವರು ಹೇಳಿರುವ Educate, Unite ಮತ್ತು Agitate ಪದಗಳನ್ನು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂದು ವಿವರಿಸಿದ್ದಾರೆ. ಆರಂಭದಲ್ಲಿ ಅಂಬೇಡ್ಕರ್ ಅವರ ಚಿಂತನೆಯನ್ನು ಸೂತ್ರ ರೂಪದಲ್ಲಿ ಸರಳವಾಗಿ ವಿವರಿಸುವ ಸಲುವಾಗಿ ಶಿಕ್ಷಣ, ಸಂಘಟನೆ