October 1, 2023 8:38 am

ಅಭಿವೃದ್ಧಿ ಮತ್ತು ರಾಜಕಾರಣ-3

  • ಪ್ರೊ. ಎಂ.ಚಂದ್ರಪೂಜಾರಿ, ಪ್ರಸಿದ್ಧ ಸಂಶೋಧಕರು ಮತ್ತು ವಿದ್ವಾಂಸರು

ಕರ್ನಾಟಕದ ಪ್ರಮುಖ ರಾಜಕೀಯ ಹಾಗೂ ಅಭಿವೃದ್ಧಿ ಚಿಂತಕರಾಗಿ ಪ್ರೊ. ಎಂ.ಚಂದ್ರಪೂಜಾರಿ ಹೆಸರಾಗಿದ್ದಾರೆ. ಅವರು ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಬಡತನ ಮತ್ತು ಅಸಮಾನತೆಗಳು ದೇವರ ಸೃಷ್ಟಿಯಲ್ಲ ನಾವೇ ಸೃಷ್ಟಿಸುವಂತದ್ದು. ನಾವು ಆರಿಸಿ ಕಳಿಸುವ ಜನಪ್ರತಿನಿಧಿಗಳ ಪಾತ್ರವೂ ಬಹುಮುಖ್ಯವಾಗುತ್ತದೆ. 70-75 ವರ್ಷದಲ್ಲಿ ಇಷ್ಟೊಂದು ಅಸಮಾನತೆ ಇರುವಾಗ ಅದರ ಹಿಂದೆ ರಾಜಕಾರಣ ಇದ್ದೇ ಇದೆ. ಜನರ ಮತ್ತು ಪ್ರತಿನಿದಿಗಳ ಆದ್ಯತೆ ಬೇರೆ ಬೇರೆಯಾಗಿರುತ್ತದೆ ಎಂದರು.

ಮಾನವ ಬಂಧುತ್ವ ವೇದಿಕೆ ವತಿಯಿಂದ ಆಗಸ್ಟ್ 16, 2021ರಂದು ಆಯೋಜಿಸಲಾಗಿದ್ದ ಬಂಧುತ್ವ ಬೆಳಕು ಉಪನ್ಯಾಸ ಮಾಲಿಕೆಯ ವೆಬಿನಾರ್ ಸರಣಿಯಲ್ಲಿ “ಅಭಿವೃದ್ಧಿ ಮತ್ತು ರಾಜಕಾರಣ ಭಾಗ 3” ವಿಷಯದ ಕುರಿತು  ಮಾತಾಡಿದ ಅವರು, ನೀತಿಗಳು ಸಂಪನ್ಮೂಲಗಳನ್ನು ಮೇಲಿನಿಂದ ಕೆಳಗೆ ಹರಿಸದೇ ತದ್ವಿರುದ್ಧವಾಗಿವೆ. ಕಾರಣ ದುಡ್ಡು, ಜಾತಿ, ಧರ್ಮದ ಆಧಾರದಲ್ಲಿ ರಾಜಕಾರಣ ಮಾಡುತ್ತಾರೆ ಎಂದರು.

ಎಮ್ ಎಲ್ ಎ, ಎಂ ಪಿ ಚುನಾವಣೆಗೆ ಕನಿಷ್ಠ 5-10 ಕೋಟಿ ಖರ್ಚು ಮಾಡುತ್ತಿದ್ದಾರೆ. ಪ್ರಚಾರಕ್ಕಾಗಿ ಸಾಕಷ್ಟು ವ್ಯಯಿಸಬೇಕು. ಕಾರ್ಯಕರ್ತರ ನೇಮಕ, ಪತ್ರಿಕೆ, ಟಿವಿಗಳಲ್ಲಿ ಪ್ರಚಾರ ಬೇಕು. ಸಮಾವೇಶ ಮಾಡಿಸಬೇಕು. ನಾಯಕರನ್ನು ಕರೆಯಿಸಬೇಕು. ಹೀಗಾಗಿ ಹೆಚ್ಚು ಖರ್ಚು ಮಾಡಿಸಿದವರು ಹೆಚ್ಚು ಜನರಿಗೆ ಪರಿಚಯವಾಗುವಲ್ಲಿ ಯಶಸ್ವಿಯಾಗುತ್ತಾರೆ. ದುಡ್ಡಿನ ಜೊತೆಗೆ ಜಾತಿಯ ಪ್ರಾಮುಖ್ಯತೆಯೂ ಟಿಕೇಟಿನ ವಿಷಯದಲ್ಲಿ ಕೆಲಸ ಮಾಡುತ್ತದೆ. ಬಲಾಢ್ಯ ಜಾತಿ, ಧರ್ಮ, ಗೆಲ್ಲುವ ಸಾಧ್ಯತೆಗಳನ್ನು ನೋಡಿ ಟಿಕೇಟು ಕೊಡುತ್ತಾರೆ. ಜನರು ತಮ್ಮ ಆಸಕ್ತಿಗೆ ವಿರುದ್ಧವಾಗಿ ಈ ಕಾರಣಕ್ಕಾಗಿ ಜನಪ್ರತಿನಿಧಿಗಳನ್ನು ಆರಿಸುತ್ತಾರೆ ಎಂದರು.

ಸಾಂಸ್ಕೃತಿಕ ರಾಜಕಾರಣ, ಮಾಧ್ಯಮ, ಶಿಕ್ಷಣ, ಆಧುನಿಕ ಸಂಸ್ಥೆಗಳು ಕೆಲಸ ಮಾಡುವ ವಿಧಾನ, ಮಠ ಮಾನ್ಯಗಳು ಇವುಗಳೆಲ್ಲ ಶ್ರೇಣಿಕೃತ ವ್ಯವಸ್ಥೆಯನ್ನು ಮುಂದುವರೆಸುತ್ತವೆ ಎಂದರು.

ಸಾಂಸ್ಕೃತಿಕ ರಾಜಕಾರಣ ಎಂದರೆ ಜನರು ಏನು ಓದಬೇಕು, ನೋಡಬೇಕು, ಕೇಳಬೇಕು ಎಂದೆಲ್ಲ ತೀರ್ಮಾನಿಸುವುದೇ ಆಗಿದೆ. ಈ ಪ್ರಕ್ರಿಯೆಗಳನ್ನು ಯಾಕೆ ಬಲಾಢ್ಯರು ತೀರ್ಮಾನಿಸುತ್ತಾರೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಹೊಸ ವಿಚಾರಗಳನ್ನು ಜನರ ಪ್ರಜ್ಞೆಗೆ ಬರದಂತೆ ನಿಯಂತ್ರಿಸುತ್ತಾರೆ.  ಜನರ ಆಹಾರ ಪದ್ಧತಿಯನ್ನು ನಿಯಂತ್ರಿಸುತ್ತಾರೆ. ಸಸ್ಯಾಹಾರ ಸೇವನೆ ಮಾಡುವವರಿಗೆ ಸಾತ್ವಿಕ ಗುಣ, ಮಾಂಸಾಹಾರದಿಂದ ತಾಮಸ ಗುಣ ಬರುತ್ತದೆ ಎಂದು ವರ್ಗೀಕರಿಸುತ್ತಾರೆ. ಪ್ರೀತಿಯ ವಿಷಯದಲ್ಲಿಯೂ ಅಷ್ಟೇ. ಪ್ರೀತಿಯೂ ರಾಜಕಾರಣಕ್ಕೆ ಸಿಲುಕಿ ಲವ್ ಜಿಹಾದ್, ಮರ್ಯಾದಾ ಹತ್ಯೆಗಳಿಗೆ ಕಾರಣಗಳಾಗಿವೆ. ಕೆಳಸ್ಥರದ ಜನರ ಮನಸ್ಸಿನ ಮೇಲೆ ಹಿಡಿತ ಸಾಧಿಸುತ್ತಾರೆ ಎಂದರು.

ಮಾಧ್ಯಮ

ಪ್ರಜಾಪ್ರಭುತ್ವದಲ್ಲಿ ಮಾಧ್ಯಮದ ಪಾತ್ರ ಬಹುಮುಖ್ಯ. ಆದರೆ ಪ್ರಾರಂಭಿಸಲು ಸಾಕಷ್ಟು ಹಣದ ಅವಶ್ಯಕತೆ ಇದೆ. ಬಲಾಢ್ಯರ ಕೈಯಲ್ಲಿ ಇವತ್ತಿನ ಟಿವಿ, ಪತ್ರಿಕೆಗಳಿವೆ. ಜಾಹೀರಾತಿನ ಮೇಲೆ ಇವೆಲ್ಲ ನಡೆಯುತ್ತವೆ. ಸರಕಾರ ಮತ್ತು ಉದ್ಯಮಗಳು ಜಾಹೀರಾತುಗಳನ್ನು ನೀಡುತ್ತವೆ. ಬಡವರಿಗೆ ಸಂಬಂಧಿಸಿದ ಯಾವುದೇ ಜಾಹೀರಾತುಗಳು ಇರುವುದಿಲ್ಲ ಎಂದರು.

ಶಿಕ್ಷಣ

ಲಿಂಗ ಅಸಮಾನತೆ, ಜಾತಿ ಅಸಮಾನತೆಗಳನ್ನು ನೋಡಿದಾಗ ಶಿಕ್ಷಣ ನಮ್ಮ ಮೇಲೆ ಅಷ್ಟೇನೂ ಪರಿಣಾಮ ಬೀರಿಲ್ಲ ಎನ್ನಬಹುದು. ಬಲಾಢ್ಯರೇ ಶಿಕ್ಷಣವನ್ನು ನಿಯಂತ್ರಿಸುವುದರಿಂದ ನಾವು ಏನು ಓದಬೇಕು, ಏನು ತಿಳಿಯಬೇಕು ಎಂಬುದೆಲ್ಲ ಅವರೇ ನಿರ್ಧರಿಸುತ್ತಾರೆ. ಹುಡುಗ ಮತ್ತು ಹುಡುಗಿಯರ ನಡುವೆ ಅಸಮಾನತೆಯನ್ನು ಮುಂದುವರೆಸುತ್ತಿದ್ದೇವೆ. ತರಗತಿಗಳಲ್ಲಿ ಪ್ರಜಾಪ್ರಭುತ್ವದ ಆಧಾರದಲ್ಲಿ ಏನೂ ನಡೆಯುವುದಿಲ್ಲ. ಕಲಿಕಾರ್ಥಿಗಳೂ ಅಷ್ಟೇ ಚರ್ಚೆಗಳೇ ನಡೆಯುತ್ತಿಲ್ಲ ಎಂದರು.

ಪಠ್ಯಗಳು ನಮ್ಮ ಸಮಾಜದ ಬಹುತೇಕರ ಸಮುದಾಯಗಳ ಬಗ್ಗೆ ಕಾಣುವುದೇ ಇಲ್ಲ. ಯಥಾಸ್ಥಿತಿಯನ್ನು ಮುಂದುವರೆಸುತ್ತಿದ್ದೇವೆ. ಎಷ್ಟೇ ಪಿ ಎಚ್ ಡಿ ಪದವೀಧರರು ಬಂದರೂ ಪ್ರಶ್ನಿಸುವಷ್ಟು ಪ್ರಬುದ್ಧರಾಗುತ್ತಿಲ್ಲ ಎಂದರು.

ಆಧುನಿಕ ಸಂಸ್ಥೆಗಳು

ಸಾಮಾಜಿಕ ಪರಿವರ್ತನೆಯ ಉದ್ಧೇಶಗಳನ್ನು ಹೊಂದಿದ್ದರೂ ಅಲ್ಲೆಲ್ಲ ತದ್ವಿರುದ್ಧ ಚಟುವಟಿಕೆಗಳು ನಡೆಯುತ್ತಿವೆ. ಕೋರ್ಟು, ಪೊಲೀಸ್, ವಿಧಾನಸೌಧಗಳಲ್ಲಿ ಎಲ್ಲ ವ್ಯವಹಾರಗಳೇ ನಡೆಯುತ್ತಿವೆ. ಅಧಿಕಾರಿಗಳಿಗೆ ಜನ ಗುಲಾಮರಂತೆ ನಡೆದುಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಜನರಿಗೆ ಗೌರವ ಕೊಡದೇ ಪಾಳೆಗಾರರಂತೆ ವರ್ತಿಸುತ್ತಿದ್ದಾರೆ ಎಂದರು.

ಮಠ ಮಂದಿರಗಳು

ಪ್ರತಿ ಜಾತಿಯ ಮಠಗಳಿವೆ. ಜನ ವೈದಿಕ ಪರಂಪರೆಯನ್ನೇ ಮುಂದುವರೆಸುತ್ತಿದ್ದಾರೆ. ರಾಜಕಾರಣದ ಮೇಲೆ ಅವುಗಳು ಹತೋಟಿ ಸಾಧಿಸಿವೆ. ಜನರ ಬದುಕನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲು ಇವುಗಳೂ ಕಾರಣವಾಗಿವೆ ಎಂದರು.

ದೊಡ್ಡ ಮಟ್ಟಿಗೆ ಸರಕಾರ ಖರ್ಚು ಮಾಡುತ್ತಿದ್ದರೂ 10-20 ಶೇಕಡಾ ಜನ ಮಾತ್ರ ಇದರ ಲಾಭ ಪಡೆಯುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ದೋಷವಿದೆ. ಸಾಮಾನ್ಯ ಜನರಿಗೆ ಮೂಲಭೂತ ಸೌಲಭ್ಯಗಳೇ ಇಲ್ಲ. ಮೇಲ್ಕಂಡ ವಿಷಯಗಳು ಜನರ ಬದುಕನ್ನು ಮತ್ತಷ್ಟು ಅಸಮಾನತೆಯಡೆಗೆ ನೂಕುತ್ತಿವೆ ಎಂದರು.

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು