March 25, 2023 5:16 pm

ಅಭಿವೃದ್ಧಿ ಮತ್ತು ರಾಜಕಾರಣ-3

  • ಪ್ರೊ. ಎಂ.ಚಂದ್ರಪೂಜಾರಿ, ಪ್ರಸಿದ್ಧ ಸಂಶೋಧಕರು ಮತ್ತು ವಿದ್ವಾಂಸರು

ಕರ್ನಾಟಕದ ಪ್ರಮುಖ ರಾಜಕೀಯ ಹಾಗೂ ಅಭಿವೃದ್ಧಿ ಚಿಂತಕರಾಗಿ ಪ್ರೊ. ಎಂ.ಚಂದ್ರಪೂಜಾರಿ ಹೆಸರಾಗಿದ್ದಾರೆ. ಅವರು ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಬಡತನ ಮತ್ತು ಅಸಮಾನತೆಗಳು ದೇವರ ಸೃಷ್ಟಿಯಲ್ಲ ನಾವೇ ಸೃಷ್ಟಿಸುವಂತದ್ದು. ನಾವು ಆರಿಸಿ ಕಳಿಸುವ ಜನಪ್ರತಿನಿಧಿಗಳ ಪಾತ್ರವೂ ಬಹುಮುಖ್ಯವಾಗುತ್ತದೆ. 70-75 ವರ್ಷದಲ್ಲಿ ಇಷ್ಟೊಂದು ಅಸಮಾನತೆ ಇರುವಾಗ ಅದರ ಹಿಂದೆ ರಾಜಕಾರಣ ಇದ್ದೇ ಇದೆ. ಜನರ ಮತ್ತು ಪ್ರತಿನಿದಿಗಳ ಆದ್ಯತೆ ಬೇರೆ ಬೇರೆಯಾಗಿರುತ್ತದೆ ಎಂದರು.

ಮಾನವ ಬಂಧುತ್ವ ವೇದಿಕೆ ವತಿಯಿಂದ ಆಗಸ್ಟ್ 16, 2021ರಂದು ಆಯೋಜಿಸಲಾಗಿದ್ದ ಬಂಧುತ್ವ ಬೆಳಕು ಉಪನ್ಯಾಸ ಮಾಲಿಕೆಯ ವೆಬಿನಾರ್ ಸರಣಿಯಲ್ಲಿ “ಅಭಿವೃದ್ಧಿ ಮತ್ತು ರಾಜಕಾರಣ ಭಾಗ 3” ವಿಷಯದ ಕುರಿತು  ಮಾತಾಡಿದ ಅವರು, ನೀತಿಗಳು ಸಂಪನ್ಮೂಲಗಳನ್ನು ಮೇಲಿನಿಂದ ಕೆಳಗೆ ಹರಿಸದೇ ತದ್ವಿರುದ್ಧವಾಗಿವೆ. ಕಾರಣ ದುಡ್ಡು, ಜಾತಿ, ಧರ್ಮದ ಆಧಾರದಲ್ಲಿ ರಾಜಕಾರಣ ಮಾಡುತ್ತಾರೆ ಎಂದರು.

ಎಮ್ ಎಲ್ ಎ, ಎಂ ಪಿ ಚುನಾವಣೆಗೆ ಕನಿಷ್ಠ 5-10 ಕೋಟಿ ಖರ್ಚು ಮಾಡುತ್ತಿದ್ದಾರೆ. ಪ್ರಚಾರಕ್ಕಾಗಿ ಸಾಕಷ್ಟು ವ್ಯಯಿಸಬೇಕು. ಕಾರ್ಯಕರ್ತರ ನೇಮಕ, ಪತ್ರಿಕೆ, ಟಿವಿಗಳಲ್ಲಿ ಪ್ರಚಾರ ಬೇಕು. ಸಮಾವೇಶ ಮಾಡಿಸಬೇಕು. ನಾಯಕರನ್ನು ಕರೆಯಿಸಬೇಕು. ಹೀಗಾಗಿ ಹೆಚ್ಚು ಖರ್ಚು ಮಾಡಿಸಿದವರು ಹೆಚ್ಚು ಜನರಿಗೆ ಪರಿಚಯವಾಗುವಲ್ಲಿ ಯಶಸ್ವಿಯಾಗುತ್ತಾರೆ. ದುಡ್ಡಿನ ಜೊತೆಗೆ ಜಾತಿಯ ಪ್ರಾಮುಖ್ಯತೆಯೂ ಟಿಕೇಟಿನ ವಿಷಯದಲ್ಲಿ ಕೆಲಸ ಮಾಡುತ್ತದೆ. ಬಲಾಢ್ಯ ಜಾತಿ, ಧರ್ಮ, ಗೆಲ್ಲುವ ಸಾಧ್ಯತೆಗಳನ್ನು ನೋಡಿ ಟಿಕೇಟು ಕೊಡುತ್ತಾರೆ. ಜನರು ತಮ್ಮ ಆಸಕ್ತಿಗೆ ವಿರುದ್ಧವಾಗಿ ಈ ಕಾರಣಕ್ಕಾಗಿ ಜನಪ್ರತಿನಿಧಿಗಳನ್ನು ಆರಿಸುತ್ತಾರೆ ಎಂದರು.

ಸಾಂಸ್ಕೃತಿಕ ರಾಜಕಾರಣ, ಮಾಧ್ಯಮ, ಶಿಕ್ಷಣ, ಆಧುನಿಕ ಸಂಸ್ಥೆಗಳು ಕೆಲಸ ಮಾಡುವ ವಿಧಾನ, ಮಠ ಮಾನ್ಯಗಳು ಇವುಗಳೆಲ್ಲ ಶ್ರೇಣಿಕೃತ ವ್ಯವಸ್ಥೆಯನ್ನು ಮುಂದುವರೆಸುತ್ತವೆ ಎಂದರು.

ಸಾಂಸ್ಕೃತಿಕ ರಾಜಕಾರಣ ಎಂದರೆ ಜನರು ಏನು ಓದಬೇಕು, ನೋಡಬೇಕು, ಕೇಳಬೇಕು ಎಂದೆಲ್ಲ ತೀರ್ಮಾನಿಸುವುದೇ ಆಗಿದೆ. ಈ ಪ್ರಕ್ರಿಯೆಗಳನ್ನು ಯಾಕೆ ಬಲಾಢ್ಯರು ತೀರ್ಮಾನಿಸುತ್ತಾರೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಹೊಸ ವಿಚಾರಗಳನ್ನು ಜನರ ಪ್ರಜ್ಞೆಗೆ ಬರದಂತೆ ನಿಯಂತ್ರಿಸುತ್ತಾರೆ.  ಜನರ ಆಹಾರ ಪದ್ಧತಿಯನ್ನು ನಿಯಂತ್ರಿಸುತ್ತಾರೆ. ಸಸ್ಯಾಹಾರ ಸೇವನೆ ಮಾಡುವವರಿಗೆ ಸಾತ್ವಿಕ ಗುಣ, ಮಾಂಸಾಹಾರದಿಂದ ತಾಮಸ ಗುಣ ಬರುತ್ತದೆ ಎಂದು ವರ್ಗೀಕರಿಸುತ್ತಾರೆ. ಪ್ರೀತಿಯ ವಿಷಯದಲ್ಲಿಯೂ ಅಷ್ಟೇ. ಪ್ರೀತಿಯೂ ರಾಜಕಾರಣಕ್ಕೆ ಸಿಲುಕಿ ಲವ್ ಜಿಹಾದ್, ಮರ್ಯಾದಾ ಹತ್ಯೆಗಳಿಗೆ ಕಾರಣಗಳಾಗಿವೆ. ಕೆಳಸ್ಥರದ ಜನರ ಮನಸ್ಸಿನ ಮೇಲೆ ಹಿಡಿತ ಸಾಧಿಸುತ್ತಾರೆ ಎಂದರು.

ಮಾಧ್ಯಮ

ಪ್ರಜಾಪ್ರಭುತ್ವದಲ್ಲಿ ಮಾಧ್ಯಮದ ಪಾತ್ರ ಬಹುಮುಖ್ಯ. ಆದರೆ ಪ್ರಾರಂಭಿಸಲು ಸಾಕಷ್ಟು ಹಣದ ಅವಶ್ಯಕತೆ ಇದೆ. ಬಲಾಢ್ಯರ ಕೈಯಲ್ಲಿ ಇವತ್ತಿನ ಟಿವಿ, ಪತ್ರಿಕೆಗಳಿವೆ. ಜಾಹೀರಾತಿನ ಮೇಲೆ ಇವೆಲ್ಲ ನಡೆಯುತ್ತವೆ. ಸರಕಾರ ಮತ್ತು ಉದ್ಯಮಗಳು ಜಾಹೀರಾತುಗಳನ್ನು ನೀಡುತ್ತವೆ. ಬಡವರಿಗೆ ಸಂಬಂಧಿಸಿದ ಯಾವುದೇ ಜಾಹೀರಾತುಗಳು ಇರುವುದಿಲ್ಲ ಎಂದರು.

ಶಿಕ್ಷಣ

ಲಿಂಗ ಅಸಮಾನತೆ, ಜಾತಿ ಅಸಮಾನತೆಗಳನ್ನು ನೋಡಿದಾಗ ಶಿಕ್ಷಣ ನಮ್ಮ ಮೇಲೆ ಅಷ್ಟೇನೂ ಪರಿಣಾಮ ಬೀರಿಲ್ಲ ಎನ್ನಬಹುದು. ಬಲಾಢ್ಯರೇ ಶಿಕ್ಷಣವನ್ನು ನಿಯಂತ್ರಿಸುವುದರಿಂದ ನಾವು ಏನು ಓದಬೇಕು, ಏನು ತಿಳಿಯಬೇಕು ಎಂಬುದೆಲ್ಲ ಅವರೇ ನಿರ್ಧರಿಸುತ್ತಾರೆ. ಹುಡುಗ ಮತ್ತು ಹುಡುಗಿಯರ ನಡುವೆ ಅಸಮಾನತೆಯನ್ನು ಮುಂದುವರೆಸುತ್ತಿದ್ದೇವೆ. ತರಗತಿಗಳಲ್ಲಿ ಪ್ರಜಾಪ್ರಭುತ್ವದ ಆಧಾರದಲ್ಲಿ ಏನೂ ನಡೆಯುವುದಿಲ್ಲ. ಕಲಿಕಾರ್ಥಿಗಳೂ ಅಷ್ಟೇ ಚರ್ಚೆಗಳೇ ನಡೆಯುತ್ತಿಲ್ಲ ಎಂದರು.

ಪಠ್ಯಗಳು ನಮ್ಮ ಸಮಾಜದ ಬಹುತೇಕರ ಸಮುದಾಯಗಳ ಬಗ್ಗೆ ಕಾಣುವುದೇ ಇಲ್ಲ. ಯಥಾಸ್ಥಿತಿಯನ್ನು ಮುಂದುವರೆಸುತ್ತಿದ್ದೇವೆ. ಎಷ್ಟೇ ಪಿ ಎಚ್ ಡಿ ಪದವೀಧರರು ಬಂದರೂ ಪ್ರಶ್ನಿಸುವಷ್ಟು ಪ್ರಬುದ್ಧರಾಗುತ್ತಿಲ್ಲ ಎಂದರು.

ಆಧುನಿಕ ಸಂಸ್ಥೆಗಳು

ಸಾಮಾಜಿಕ ಪರಿವರ್ತನೆಯ ಉದ್ಧೇಶಗಳನ್ನು ಹೊಂದಿದ್ದರೂ ಅಲ್ಲೆಲ್ಲ ತದ್ವಿರುದ್ಧ ಚಟುವಟಿಕೆಗಳು ನಡೆಯುತ್ತಿವೆ. ಕೋರ್ಟು, ಪೊಲೀಸ್, ವಿಧಾನಸೌಧಗಳಲ್ಲಿ ಎಲ್ಲ ವ್ಯವಹಾರಗಳೇ ನಡೆಯುತ್ತಿವೆ. ಅಧಿಕಾರಿಗಳಿಗೆ ಜನ ಗುಲಾಮರಂತೆ ನಡೆದುಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಜನರಿಗೆ ಗೌರವ ಕೊಡದೇ ಪಾಳೆಗಾರರಂತೆ ವರ್ತಿಸುತ್ತಿದ್ದಾರೆ ಎಂದರು.

ಮಠ ಮಂದಿರಗಳು

ಪ್ರತಿ ಜಾತಿಯ ಮಠಗಳಿವೆ. ಜನ ವೈದಿಕ ಪರಂಪರೆಯನ್ನೇ ಮುಂದುವರೆಸುತ್ತಿದ್ದಾರೆ. ರಾಜಕಾರಣದ ಮೇಲೆ ಅವುಗಳು ಹತೋಟಿ ಸಾಧಿಸಿವೆ. ಜನರ ಬದುಕನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲು ಇವುಗಳೂ ಕಾರಣವಾಗಿವೆ ಎಂದರು.

ದೊಡ್ಡ ಮಟ್ಟಿಗೆ ಸರಕಾರ ಖರ್ಚು ಮಾಡುತ್ತಿದ್ದರೂ 10-20 ಶೇಕಡಾ ಜನ ಮಾತ್ರ ಇದರ ಲಾಭ ಪಡೆಯುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ದೋಷವಿದೆ. ಸಾಮಾನ್ಯ ಜನರಿಗೆ ಮೂಲಭೂತ ಸೌಲಭ್ಯಗಳೇ ಇಲ್ಲ. ಮೇಲ್ಕಂಡ ವಿಷಯಗಳು ಜನರ ಬದುಕನ್ನು ಮತ್ತಷ್ಟು ಅಸಮಾನತೆಯಡೆಗೆ ನೂಕುತ್ತಿವೆ ಎಂದರು.

Share:

Leave a Reply

Your email address will not be published. Required fields are marked *

More Posts

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ

On Key

Related Posts

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಭಕ್ತಿ ಪಂಥ ‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ