ಬೆಳಗಾವಿ: ಘಟಪ್ರಭಾದ ಡಾ.ಎನ್.ಎಸ್.ಹರ್ಡೀಕರ್ ಸೇವಾದಳ ರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.
ಸೇವಾದಳದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಲರಾಂ ಸಿಂಗ್ ಬದೋರಿಯಾ ಪೇರಳೆ ಗಿಡವನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿದರು.
ಕೊರೊನಾ ಪ್ರಯುಕ್ತ ಸರಳವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತಾಡಿದ ಬಲರಾಂ ಸಿಂಗ್ ಬದೋರಿಯಾ, ಜಗತ್ತಿನ ರಕ್ಷಣೆಯಲ್ಲಿ ಪರಿಸರದ ಪಾತ್ರ ಮಹತ್ವದ್ದು, ನಾವೆಲ್ಲರೂ ಪರಿಸರವನ್ನು ಉಳಿಸಬೇಕು, ಬೆಳೆಸಬೇಕು ಎಂದರು.
ಭವಿಷ್ಯದ ಜನಾಂಗದ ಆರೋಗ್ಯಕ್ಕಾಗಿ ನಾವು ಪರಿಸರವನ್ನು ಉಳಿಸಬೇಕು. ಬನ್ನಿ ನಾವೆಲ್ಲ ಒಂದಾಗಿ ವೃಕ್ಷಗಳನ್ನು ನೆಡೋಣ. ಲಕ್ಷಾಂತರ ಪ್ರಾಣಿಗಳಿಗೆ ಆಮ್ಲಜನಕವನ್ನು ನೀಡೋಣ ಎಂದು ಕರೆನೀಡಿದರು. ಜೊತೆಗೆ, ಒಂದು ವೃಕ್ಷ ಲಕ್ಷಾಂತರ ಪ್ರಾಣಿಗಳನ್ನು ಉಳಿಸುತ್ತದೆ. ಭವಿಷ್ಯಕ್ಕಾಗಿ ನಾವೆಲ್ಲ ಪರಿಸರ ರಕ್ಷಣೆಯನ್ನು ಮಾಡಬೇಕು. ನಮ್ಮ ನಂತರದ ಜನಾಂಗಕ್ಕೂ ಪರಿಸರ ರಕ್ಷಣೆಯ ಮಹತ್ವವನ್ನು ಹೇಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಸಂಚಾಲಕ ಮಹಾಲಿಂಗಪ್ಪ ಆಲಬಾಳ, ಡಾ. ಎನ್.ಎಸ್.ಹರ್ಡೀಕರ್ ಸೇವಾದಳ ರಾಷ್ಟ್ರೀಯ ತರಬೇತಿ ಕೇಂದ್ರದ ಉಪನ್ಯಾಸಕ ಡಾ. ಪ್ರದೀಪ್ ಮಾಲ್ಗುಡಿ, ಮಾನವ ಬಂಧುತ್ವ ವೇದಿಕೆಯ ಉಷಾ ನಾಯಕ್, ಮನೀಶಾ ನಾಯಕ್, ರಮೇಶ್ ಗುಮ್ಮಗೋಳ್, ಮೋಸಿನ್ ಹುದಲಿ, ಲಿಂಗರಾಜ್ ಕಿಲ್ಲಿಲ್ಲಿ, ಉದಯ್, ಕೃಷ್ಣ ಗೋಕಾಕ್, ಪರಶುರಾಮ್, ಮಂಜು, ನಿಂಗಪ್ಪ, ಕೃಷ್ಣ ಮೊದಲಾದವರು ಹಾಜರಿದ್ದರು.