- ಪ್ರೊ. ಎಂ.ಚಂದ್ರಪೂಜಾರಿ, ಪ್ರಸಿದ್ಧ ಸಂಶೋಧಕರು ಮತ್ತು ವಿದ್ವಾಂಸರು
ಕರ್ನಾಟಕದ ಪ್ರಮುಖ ರಾಜಕೀಯ ಹಾಗೂ ಅಭಿವೃದ್ಧಿ ಚಿಂತಕರಾಗಿ ಪ್ರೊ. ಎಂ.ಚಂದ್ರಪೂಜಾರಿ ಹೆಸರಾಗಿದ್ದಾರೆ. ಅವರು ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಅಭಿವೃದ್ಧಿ ಮತ್ತು ರಾಜಕೀಯ – 2
1. ನಮ್ಮಲ್ಲಿರುವ ಪ್ರಜಾಪ್ರಭುತ್ವ ಮತ್ತು ಅಸಮಾನತೆ, ಬಡನತಗಳ ನಡುವಿನ ಸಂಬಂಧವನ್ನು ಮೊದಲು ನಾವು ವಿವರಿಸಿಕೊಳ್ಳಬೇಕಿದೆ. ಪ್ರಜಾಪ್ರಭುತ್ವ ಪ್ರಕ್ರಿಯೆಯ ಮೂಲಕ ನಾವು ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತೇವೆ. ಇವರು ನಮ್ಮ ಶಿಕ್ಷಣ, ಆರೋಗ್ಯ, ಕಾರ್ಮಿಕ, ಹಣಕಾಸು ಮತ್ತು ಇತರ ನೀತಿಗಳನ್ನು ಮಾಡುತ್ತಾರೆ.
2. ಶಿಕ್ಷಣ ನೀತಿ – ಶಿಕ್ಷಣ ಖಾಸಗಿ ಒಡೆತನದಲ್ಲಿರಬೇಕೇ ಅಥವಾ ಸಾರ್ವಜನಿಕ ಒಡೆತನದಲ್ಲಿರಬೇಕೇ? ಸರಕಾರ ಶಿಕ್ಷಣದ ಮೇಲೆ ಎಷ್ಟು ವಿನಿಯೋಗಿಸಬೇಕು? ಬಡವರಿಗೊಂದು ಶಿಕ್ಷಣ ಅನುಕೂಲಸ್ಥರಿಗೊಂದು ಶಿಕ್ಷಣ ಇರಬೇಕೇ? ಗ್ರಾಮೀಣ ಪ್ರದೇಶದಲ್ಲಿರುವವರಿಗೊಂದು ಶಿಕ್ಷಣ ನಗರ ಪ್ರದೇಶದಲ್ಲಿರುವವರಿಗೆ ಇನ್ನೊಂದು ಶಿಕ್ಷಣ ಇರಬೇಕೇ ಎನ್ನುವುದನ್ನು ಶಿಕ್ಷಣ ನೀತಿ ನಿರ್ಧರಿಸುತ್ತದೆ. ಈ ನೀತಿಯನ್ನು ನಾವು ಆಯ್ಕೆ ಮಾಡಿದ ಎಂಎಲ್ಎ, ಎಂಪಿಗಳು ನಿರ್ಧರಿಸುತ್ತಾರೆ.
3. ಆರೋಗ್ಯ ನೀತಿ – ಸರಕಾರವೇ ಎಲ್ಲರಿಗೂ ಆರೋಗ್ಯ ವ್ಯವಸ್ಥೆ ಮಾಡಬೇಕೇ? ಅಥವಾ ಖಾಸಗಿಯವರು ಕೂಡ ಕೈಜೋಡಿಸಬೇಕೇ? ಸರಕಾರ ಆರೋಗ್ಯ ವ್ಯವಸ್ಥೆ ಮೇಲೆ ಎಷ್ಟು ವಿನಿಯೋಗಿಸಬೇಕು? ಇತ್ಯಾದಿ ತೀರ್ಮಾನಗಳನ್ನು ಪಾಲಿಸಿ ಮಾಡುತ್ತದೆ.
4. ಕಾರ್ಮಿಕ ನೀತಿ – ಕಾರ್ಮಿಕ ನೀತಿ ದುಡಿಯುವ ವರ್ಗಕ್ಕೆ ಪರ ಇರಬೇಕೆ? ಉದ್ಯಮಿಗಳ ಪರ ಇರಬೇಕೇ? ಕಾರ್ಮಿಕರಿಗೆ ಉದ್ಯೋಗ ಭದ್ರತೆ ಇರಬೇಕೇ? ಸಂಬಳದ ಭದ್ರತೆ ಇರಬೇಕೆ? ಸಾಮಾಜಿಕ ಭದ್ರತೆ ಇರಬೇಕೆ? ಎನ್ನುವುದನ್ನು ಕಾರ್ಮಿಕ ನೀತಿ ನಿರ್ಧರಿಸುತ್ತದೆ.
5. ಕೃಷಿ ನೀತಿ – ಕೃಷಿ ನೀತಿ ಕೃಷಿಕರ ಪರಬೇಕೇ? ಅಥವಾ ಉದ್ದಿಮೆಗಳ ಪರ ಇರಬೇಕೇ? ಕೃಷಿಕರಿಗೆ ನೀರಾವರಿ ವ್ಯವಸ್ಥೆ ಮಾಡಬೇಕೇ? ಹಣಕಾಸು ಪೂರೈಕೆ ಮಾಡಬೇಕೇ? ಮೂಲಸೌಕರ್ಯ ವ್ಯವಸ್ಥೆ ಮಾಡಬೇಕೇ? ಕೃಷಿ ಮಾರುಕಟ್ಟೆ ಹೇಗಿರಬೇಕು? ಇತ್ಯಾದಿಗಳನ್ನು ಕೃಷಿ ನೀತಿ ನಿರ್ಧರಿಸುತ್ತದೆ.
6. ನಮ್ಮ ರಾಜಕೀಯ ನೀತಿ – ಯಾರು ಚುನಾವಣೆಗೆ ಸ್ಪರ್ಧಿಸಬಹುದು? ಚುನಾವಣೆಯಲ್ಲಿ ಎಷ್ಟು ಕರ್ಚು ಮಾಡಬಹುದು? ಎಷ್ಟು ಸ್ತರದ ಸರಕಾರಗಳು ಬೇಕು? ಪಕ್ಷಗಳು ಹೇಗೆ ಹಣ ಸಂಗ್ರಹಿಸಬಹುದು? ಇತ್ಯಾದಿಗಳನ್ನು ರಾಜಕೀಯ ನೀತಿ ನಿರ್ಧರಿಸುತ್ತದೆ.
7. ನಮ್ಮ ಸಾಮಾಜಿಕ/ಸಾಂಸ್ಕೃತಿಕ ನೀತಿಗಳು – ಮ್ಯಾರೇಜ್ ಆಕ್ಟ್, ವರದಕ್ಷಿಣೆ ನಿಷೇಧ ಕಾಯಿದೆ, ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ, ಲೈಂಗಿಕ ದೌರ್ಜನ್ಯ ತಡೆ ಕಾಯಿದೆ ಇತ್ಯಾದಿಗಳನ್ನು ರೂಪಿಸುವವರು ನಮ್ಮ ಪ್ರತಿನಿಧಿಗಳು.
ಜನಪ್ರತಿನಿಧಿಗಳು ರೂಪಿಸಿ ಜಾರಿಗೆ ತರುವ ಕಾಯಿದೆಗಳು ನಮ್ಮ ಆರ್ಥಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬದುಕನ್ನು ರೂಪಿಸುತ್ತವೆ. ತಳಸ್ತರದ ಜನರಿಗೆ ನೆಮ್ಮದಿಯ ಬದುಕು ಬೇಕಾದರೆ ಅವರ ಕಷ್ಟಸುಖಗಳನ್ನು ಅರ್ಥಮಾಡಿಕೊಳ್ಳುವವರು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸುವಂತಹ ನೀತಿಗಳನ್ನು ರೂಪಿಸಿ ಜಾರಿಗೆ ತರುವವರನ್ನು ಪ್ರತಿನಿಧಿಗಳನ್ನಾಗಿ ಚುನಾಯಿಸಬೇಕು.
ತಳಸ್ತರದ ಜನರ ಕಷ್ಟ ಸುಖಗಳನ್ನು ಯಾರು ಅರ್ಥ ಮಾಡಿಕೊಳ್ಳಬಹುದು? ಮಹಿಳೆಯರ ಸಮಸ್ಯೆಯನ್ನು ಮಹಿಳೆ ಅರ್ಥ ಮಾಡಿಕೊಂಡಷ್ಟು ಪುರುಷರು ಅರ್ಥಮಾಡಿಕೊಳ್ಳಬಹುದೇ? ಅಲ್ಪಸಂಖ್ಯಾತರ ಕಷ್ಟಸುಖಗಳನ್ನು ಅಲ್ಪಸಂಖ್ಯಾತರು ಅರ್ಥಮಾಡಿಕೊಂಡಷ್ಟು ಬಹುಸಂಖ್ಯಾತರು ಅರ್ಥ ಮಾಡಿಕೊಳ್ಳಬಹುದೇ? ಕೂಲಿ ಕಾರ್ಮಿಕರ ಕಷ್ಟಗಳನ್ನು ಉದ್ದಿಮೆ ಮಾಲೀಕರು ಅರ್ಥಮಾಡಿಕೊಳ್ಳಬಹುದೇ? ಭೂರಹಿತರ ಸಮಸ್ಯೆಯನ್ನು ಭೂಮಾಲೀಕರು ಅರ್ಥಮಾಡಿಕೊಳ್ಳಲು ಸಾಧ್ಯವೇ?
ಅಂದರೆ ಮಹಿಳೆಯರಿಗೆ ಅನುಕೂಲವಾಗುವ ಅಭಿವೃದ್ಧಿ ನೀತಿಗಳು ರೂಪುಗೊಂಡು ಜಾರಿಗೆ ಬರಬೇಕಾದರೆ ಮಹಿಳಾ ಪ್ರತಿನಿಧಿಗಳಿರಬೇಕು. ದುಡಿಯುವ ವರ್ಗದವರಿಗೆ ಅನುಕೂಲವಾಗುವ ನೀತಿಗಳು ಜಾರಿಗೆ ಬರಬೇಕಾದರೆ ದುಡಿಯುವ ವರ್ಗದ ಪ್ರತಿನಿಧಿಗಳಿರಬೇಕು. ಭೂರಹಿತರಿಗೆ ಅನುಕೂಲವಾಗುವ ನೀತಿಗಳು ಜಾರಿಗೆ ಬರಬೇಕಾದರೆ ಭೂರಹಿತ ಪ್ರತಿನಿಧಿಗಳು ಬೇಕು.
ಯಾರು ಪ್ರತಿನಿಧಿಗಳು?
ಇಂದು ನಮ್ಮ ರಾಜ್ಯದ ಅಸೆಂಬ್ಲಿಯಲ್ಲಿ ಕೇಂದ್ರ ಸರಕಾರ ನಡೆಸುವ ಪಾರ್ಲಿಮೆಂಟ್ಲ್ಲಿ ಯಾರು ಪ್ರತಿನಿಧಿಗಳಾಗುತ್ತಿದ್ದಾರೆ?
ಮಹಿಳೆಯರು – ನಮ್ಮಲ್ಲಿ ಶೇ.49ರಷ್ಟು ಮಹಿಳೆಯರಿದ್ದಾರೆ. ಆದರೆ ಅಸೆಂಬ್ಲಿ ಮತ್ತು ಪಾರ್ಲಿಮೆಂಟ್ಲ್ಲಿ ಅವರ ಪ್ರತಿನಿಧಿತ್ವ ತುಂಬಾ ಕಡಿಮೆ ಇದೆ.
Total Assembly Seats – 224 Total Parliament Seats – 543
Year No % Year No %
2008 03 1.33 2009 59 10.86
2013 06 2.67 2014 62 11.23
2018 07 3.12 2019 78 14.58
ಅಲ್ಪಸಂಖ್ಯಾತರು- ನಮ್ಮಲ್ಲಿ ಹೆಚ್ಚು ಕಡಿಮೆ ಶೇ.16ರಷ್ಟು ಅಲ್ಪಸಂಖ್ಯಾತರಿದ್ದಾರೆ. ಅವರಲ್ಲಿ ಶೇ.13ರಷ್ಟು ಮುಸ್ಲಿಮರು. ಅವರ ಪ್ರತಿನಿಧಿತ್ವ ಈ ಕೆಳಗಿನಂತಿದೆ –
Total Assembly Seats – 224 Total Parliament Seats – 543
Year No % Year No %
2013 11 4.91 2014 22 4.05
2018 07 3.12 2019 27 4.97
ದಲಿತ ಬುಡಕಟ್ಟುಗಳು – ಶೇ.25ರಷ್ಟು ದಲಿತ ಬುಡಕಟ್ಟುಗಳಿದ್ದಾರೆ. ಅವರ ಪ್ರತಿನಿಧಿತ್ವ ಅವರ ಸಂಖ್ಯೆಗೆ ಅನುಗುಣವಾಗಿದೆ.
Total Assembly Seats – 224 Total Parliament Seats – 543
Year No % Year No %
2013 55 24.55 2014 131 24.12
2018 55 24.55 2019 131 24.12
ಆದರೆ ಇವರನ್ನು ದಲಿತ ಬುಡಕಟ್ಟುಗಳ ಪ್ರತಿನಿಧಿಗಳೆನ್ನಲು ಸಾಧ್ಯವಿಲ್ಲ. ಏಕೆಂದರೆ ಇವರನ್ನು ದಲಿತ ಬುಡಕಟ್ಟುಗಳು ಮಾತ್ರ ಚುನಾಯಿಸುವುದಲ್ಲ. ದಲಿತಬುಡಕಟ್ಟೇತರರು ಕೂಡ ಇವರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಎರಡನೆಯದಾಗಿ ಎಲ್ಲ ಪಕ್ಷಗಳು ಮೀಸಲು ಕ್ಷೇತ್ರದಲ್ಲಿ ದಲಿತ ಬುಡಕಟ್ಟುಗಳನ್ನು ನಿಲ್ಲಿಸುವುದರಿಂದ ದಲಿತ ಬುಡಕಟ್ಟುಗಳ ಮತ ಹಂಚಿ ಹೋಗುತ್ತವೆ. ದಲಿತ ಬುಡಕಟ್ಟೇತರರ ಮತ ನಿರ್ಣಾಯಕ ಆಗುತ್ತದೆ.
ವರ್ಗದ ದೃಷ್ಟಿಯಿಂದ ಪ್ರತಿನಿಧಿತ್ವ – ಕರ್ನಾಟಕ ಮತ್ತು ದೇಶದ ಮತ ಹಾಕುವ ಜನರ ತಲಾ ಆದಾಯ ಇಂತಿದೆ –
Year Karnataka India
2013-14 126976 80388
2018-19 178121 126406
ಚುನಾವಣೆ ಸ್ಪರ್ಧಿಸುವ ಅಭ್ಯರ್ಥಿಗಳ ಆಸ್ತಿಪಾಸ್ತಿ ಈ ಕೆಳಗಿನಂತಿದೆ (Karnataka & National Election Watch and ADR Report)
2008 10.05 2009 5.50
2013 23.54 2014 14.70
2018 34.59 2019 20.93
ಅಂದರೆ ಮೂರು ಹೊತ್ತಿನ ಊಟಕ್ಕೆ ಪರದಾಡುವ ಮತದಾರರಿಗೆ ಕೋಟ್ಯಧಿಪತಿ ಅಭ್ಯರ್ಥಿಗಳು. ಇದನ್ನು ಜನರಿಂದ ಜನರಿಗಾಗಿ ಜನರೇ ನಡೆಸುವ ಸರಕಾರ ಎನ್ನಲು ಸಾಧ್ಯವಿಲ್ಲ. ಅದರ ಬದಲು ಇವುಗಳನ್ನು ಬಲಾಢ್ಯರಿಂದ ಬಲಾಢ್ಯರಿಗಾಗಿ ಬಲಾಢ್ಯರೇ ನಡೆಸುವ ಸರಕಾರಗಳು ಎನ್ನಬಹುದು.
ಪ್ರಜಾಪ್ರಭುತ್ವ ಎಂದರೆ ಕೇವಲ ಶಾಸಕಾಂಗ ಅಥವಾ ಪ್ರತಿನಿಧಿಗಳು ಮಾತ್ರ ಅಲ್ಲ, ನ್ಯಾಯಾಂಗ, ಮಾಧ್ಯಮಗಳು ಇವೆ. ಇವುಗಳು ಕೂಡ ಶಾಸಕಾಂಗದ ರೂಪದಲ್ಲಿ ನಮ್ಮ ಸಮಾಜದ ಕೆಲವರಿಗೆ ಸೀಮಿತವಾಗಿದೆ.
Judiciary –caste
Period Total Judges Brahmins Other upper castes
1950 -70 14 11 (78%) 02 (11%)
1971-89 17 09 (52%) nk
2004-14 52 16 (31%) 10 (19%)
2014-20 35 09 (26%) 10 (28%)
Source – Namit Saxena, Disproportionate Representation at the Supreme court – a perspective based on caste and religion, the Wire, 2021.
Upto 1980 there were no judges from SC, OBCs and STs
First SC judge appointed Varadarajan in 1980. Balakrishnan appointed in 2010. Gavai appointed last 2019.
First OBC judge appointed was SR Pandian in 1980
Judiciary – Gender
- Of the 246 supreme court judges 8 were women. Only 3% women judges. Of them 5 were appointed in the last decade.
- There are total 1113 judges of High courts and Supreme courts. Of them 80 are women or only 7% women judges.
Media
Media (%) English TV Hindi TV Eng. NP Hindi NP
Leadership Positions 89 100 92 87
Anchors/writers 75 80 60 58
Panelists 70 72 na na
Source – Oxfam India, Representation of Marginalized Caste Groups in Newsroom, New Delhi, 2019
ಸಮಾರೋಪ
1. ಪ್ರಜಾಪ್ರಭುತ್ವದ ಎಲ್ಲ ಸ್ತಂಭಗಳಲ್ಲೂ ತಳಸ್ತರದ ಜನರ ಪ್ರತಿನಿಧಿತ್ವ ಇಲ್ಲ.
2. ಶೇ.40ರಷ್ಟು ಮಹಿಳೆಯರು, ಶೇ.10ರಷ್ಟು ಅಲ್ಪಸಂಖ್ಯಾತರು ಮತ್ತು ಶೇ.25ರಷ್ಟು ದಲಿತ ಬುಡಕಟ್ಟುಗಳಿಗೆ ಟೆಕ್ನಿಕಲ್ ಪ್ರಾತಿನಿಧಿತ್ವ ಇಲ್ಲ. ಇನ್ನು ವರ್ಗದ ದೃಷ್ಟಿಯಿಂದ ನೋಡಿದರೆ ಶೇ.99 ಜನರನ್ನ ಪ್ರತಿನಿಧಿಸುವ ಪ್ರತಿನಿಧಿಗಳು ಇಲ್ಲ.
3. ಪ್ರತಿನಿಧಿತ್ವ ಇಲ್ಲದಿರುವಾಗ ಅವರ ಆಸಕ್ತಿಗಳನ್ನು ಪ್ರತಿನಿಧಿಸುವ ಪಾಲಿಸಿಗಳು ಬರಲು ಸಾಧ್ಯವಿಲ್ಲ.
4. ಪಾಲಿಸಿಗಳು ಜನಪರ ಇಲ್ಲದಿರುವ ಕಾರಣ ಸಂಪನ್ಮೂಲ ಮೇಲಿನಿಂದ ಕೆಳಗೆ ಹರಿಯುವ ಬದಲು ಕೆಳಗಿನಿಂದ ಮೇಲೆ ಹರಿಯುತ್ತಿವೆ.
5. ಸಂಪನ್ಮೂಲದ ಮರುಹಂಚಿಕೆ ಇಲ್ಲದಿರುವ ಕಾರಣ ಬಡತನ ಮತ್ತು ಅಸಮಾನತೆ ಹೆಚ್ಚುತಲೇ ಇದೆ.
6. ಬಡತನ, ಅಸಮಾನತೆಗಳು ನಿವಾರಣೆ ಆಗಬೇಕಾದರೆ ನಮ್ಮ ಪ್ರಜಾಪ್ರಭುತ್ವ ಸಾಕಷ್ಟು ಸುಧಾರಣೆಗೊಳ್ಳಬೇಕಾಗಿದೆ.