April 25, 2024 5:58 pm

ಮಾನವ ಬಂಧುತ್ವ ವೇದಿಕೆ – ಕರ್ನಾಟಕ

ಮಾನವೀಯತೆಯೇ ನಮ್ಮ ಧರ್ಮ
ಸಂವಿಧಾನವೇ ನಮ್ಮ ಧರ್ಮಗ್ರಂಥ

Play Video

ಆಶಯ

ಮಾನವ ಬಂಧುತ್ವ ವೇದಿಕೆ ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಈ ವೇದಿಕೆಯನ್ನು ಭದ್ರವಾದ ಸೈದ್ಧಾಂತಿಕ ಬುನಾದಿಯ ಮೇಲೆ ನಿರ್ಮಾಣ ಮಾಡಲಾಗಿದೆ. ಸಂವಿಧಾನದ ಮೂಲ ಆಶಯಗಳಾದ ಬಂಧುತ್ವ, ಸಮಾನತೆಯನ್ನು ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ರಾಜಕೀಯ ಶಕ್ತಿಯನ್ನು ತುಂಬಬೇಕಾದ ಸನ್ನಿವೇಶಕ್ಕೆ ಜನರನ್ನು ಸನ್ನದ್ಧಗೊಳಿಸುವುದು ನಮ್ಮ ಗುರಿ. ಇದಕ್ಕಾಗಿ ಎಲ್ಲ ಸ್ತರಗಳ ಸಮಾನ ಮನಸ್ಕರು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೆಸೆದು ಜೊತೆಗೂಡಿ ಕೆಲಸ ಮಾಡುವಂತೆ ಪ್ರೇರಣೆ ನೀಡುವುದು ನಮ್ಮ ಆದ್ಯತೆ.

ಮಾನವೀಯತೆಯೇ ನಮ್ಮ ಧರ್ಮ-ಸಂವಿಧಾನವೇ ನಮ್ಮ ಧರ್ಮಗ್ರಂಥ

ಮಾನವೀಯ ಮೌಲ್ಯಗಳು ಮತ್ತು ಸಾಂವಿಧಾನಿಕ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ, ಬಂಧುತ್ವ ಹಾಗೂ ಸಾಮಾಜಿಕ ನ್ಯಾಯದ ತತ್ವಗಳ ಆಧಾರದಲ್ಲಿ ಜಾತಿ, ವರ್ಣ, ಲಿಂಗ ಮತ್ತು ವರ್ಗಗಳ ಬೇಧವಿಲ್ಲದ ಸಮುದಾಯದ ಸಂಘಟನೆಯನ್ನು ಕಟ್ಟುವುದು, ಜನರನ್ನು ಜಾಗೃತಗೊಳಿಸುವುದು.

We organize our work around these three areas:

ಸಂಘಟನಾ ವಿಭಾಗ

ಸಮುದಾಯದ ಎಲ್ಲಾ ಜನವಿಭಾಗಗಳನ್ನು ಜಾಗೃತಗೊಳಿಸಿ ಒಗ್ಗೂಡಿಸುವುದು ವೇದಿಕೆಯ ಉದ್ಧೇಶವಾಗಿದೆ

ಸೈದ್ಧಾಂತಿಕ ವಿಭಾಗ

ಸೈದ್ಧಾಂತಿಕ ನಿಲುವುಗಳನ್ನು ಖಚಿತವಾಗಿ ನಿರ್ಧರಿಸುವ ತಂಡ ವೇದಿಕೆಯ ಕಾರ್ಯಕ್ರಮ, ಚಟುವಟಿಕೆಗಳು ಮತ್ತು ಅದರ ನಿರೀಕ್ಷಿತ ಪರಿಣಾಮಗಳ ಕುರಿತು ಯೋಚಿಸುತ್ತದೆ ಮತ್ತು ಕಾರ್ಯರೂಪಕ್ಕೆ ತರಲು ಅಗತ್ಯವಿರುವ ಕಾರ್ಯತಂತ್ರವನ್ನು ರೂಪಿಸುತ್ತದೆ.

ಸಾಂಸ್ಕೃತಿಕ ವಿಭಾಗ

ಮಾನವ ಬಂಧುತ್ವ ವೇದಿಕೆಯು ಜನಪರವಾದ ಸಾಹಿತ್ಯ ಮತು ಜನಸಂಸ್ಕೃತಿಯ ಮೂಲಕ ಜನರನ್ನು ಮುಟ್ಟುವ, ತಟ್ಟುವ ಮತ್ತು ಕಟ್ಟುವ ಕಾರ್ಯವನ್ನು ಸಾಂಸ್ಕೃತಿಕ ವಿಭಾಗ ಮಾಡುತ್ತದೆ. ಅದಕ್ಕೆ ಪೂರಕವಾದ ಕಾರ್ಯಕ್ರಗಳನ್ನು ಯೋಜಿಸಿ ಅನುಷ್ಠಾನಗೊಳಿಸುತ್ತದೆ.