March 25, 2023 4:12 pm

ಅಮೃತಬಳ್ಳಿಯ ಕಷಾಯ ಕುಡಿಯಿರಿ

ಮಂಗನ ಬಳ್ಳಿ (ಅಮೃತ ಬಳ್ಳಿ) ಕೊರೋನಾಕ್ಕೆ ಔಷಧ ಎಂದು ಅಪ್ಪಿತಪ್ಪಿಯೂ ಹೇಳಲಾರೆ. ಆದ್ರೆ ಇದರ ದಂಟು ಎಲೆಯಿಂದ ತಯಾರಿಸಿದ ಕಷಾಯ ಮಾತ್ರ ಅತ್ಯಂತ ಉಪಕಾರಿ.

ಎಷ್ಟೋ ಸಲ ಜ್ವರ ಬಂದಾಗ ಕೆಮ್ಮು ಆವರಿಸಿದಾಗ ಇದರ ದಂಟನ್ನು ಜಜ್ಜಿ ನೀರಿನಲ್ಲಿ ಅರ್ಧಕ್ಕರ್ಧ ಬತ್ತುವವರೆಗೂ ಕುದಿಸಿ ಕುಡಿದಿದ್ದೇನೆ. ಯಾವ ಇಂಗ್ಲಿಷ್ ಮೆಡಿಸಿನ್ ಕೂಡ ಇದರ ಮುಂದೆ ಲೊಳಲೊಟ್ಟೆ ಎನಿಸುವ ಹಾಗೆ ಜ್ವರ ಕೆಮ್ಮು ನನ್ನ ಮೈ ಬಿಟ್ಟು ಓಡಿ ಹೋದದ್ದಿದೆ.

ಬೆಳಗ್ಗೆ ಕಾಲಿ ಹೊಟ್ಟೆಗೇ ತೆಗೆದುಕೊಳ್ಳಬೇಕು. ನೈಸರ್ಗಿಕವಾಗಿ ಬಂದ ವ್ಯಾಧಿಯನ್ನು ನೈಸರ್ಗಿಕವಾಗೇ ಕಿತ್ತೋಡಿಸುತ್ತದೆ, ಉಲ್ಲಾಸದ ಅನುಭವ ಕೊಡುತ್ತದೆ. ಬಳಸಿದರೆ ಉತ್ತಮ. ಆದರೆ ಕೊರೋನಾಕ್ಕೇ ಇದು ಔಷಧ ಎಂದು ಮಾತ್ರ ಭಾವಿಸಬೇಡಿ. ಈ ದುರಿತ ಕಾಲದಲ್ಲಿ ಅಗತ್ಯವಾಗಿ ಸೇವಿಸಿದರೆ ಒಳಿತೆಂದು ಮಾತ್ರ ಹೇಳಬಲ್ಲೆ.

ಇದನ್ನ ಅಮೃತ ಬಳ್ಳಿ ಎಂದು ಸಂಸ್ಕೃತದಲ್ಲಿ ಕರೀತಾರೆ. ಅ-ಮೃತ ಅಂದರೆ ಸಾಯಲಾರದ್ದು. ಸಾವಿಲ್ಲದ್ದು ಅಂದರೆ ಈ ಬಳ್ಳಿ ಕಿತ್ತು ತಂದು ಮಣ್ಣಿನಲ್ಲಿ ಊರುವುದು ಬೇಡ, ಎಸೆದರೂ ಸಾಕು ಅಲ್ಲೇ ಚಿಗುರುತ್ತದೆ‌. ಕಿತ್ತು ತಂದ ಬಳ್ಳಿ ದೀರ್ಘಕಾಲ ಸಾಯದೇ ಹಾಗೇ ಇರುತ್ತದೆ. ಇದು ಅಮೃತ ಬಳ್ಳಿಯ ತಾತ್ಪರ್ಯ.

ಅಮೃತ ಎಂದರೆ ಅಮೃತವೇ ಸಾಯುವವನನ್ನೂ ಬದುಕಿಸಬಲ್ಲದು ಎಂಬ ಜನನಂಬಿಕೆ. ಮುಸಿಯಾ (ಲಂಗೂರ್) ಗಳು ಈ ಸೊಪ್ಪನ್ನು ಅತ್ಯಂತ ಆಸೆಯಿಂದ ತಿನ್ನುತ್ತವೆ. ಇದರದ್ದು ಕಹಿಯಾದ ರಸ. ಆದರೆ ಜೀವಕ್ಕೆ ಸಿಹಿ.

ಇದಕ್ಕೆ ಮಂಗನ ಬಳ್ಳಿ ಎಂದು ಜನಪದರು ಕರೀತಾರೆ. ಈ ಹೆಸರು ಬರಲು ಕಾರಣ ಇದರ ದಂಟಿನುದ್ದಕ್ಕೂ ಮಂಗನ ಬಾಲದ ರೀತಿ ಬೇರುಗಳು ಇಳಿಬೀಳುತ್ತವೆ ಅವು ನೆಲಕ್ಕೆ ತಾಗಿ ಅಲ್ಲಿಂದಲೇ ಹೊಸಬೇರು ಬಿಟ್ಟು ಬಳ್ಳಿಗೆ ಆಹಾರ ಒದಗಿಸುತ್ತದಲ್ಲದೆ ಬಳ್ಳಿಯನ್ನು ಉದ್ದುದ್ದಕ್ಕೆ ಹಬ್ಬಲು ಸಹಕರಿಸುತ್ತದೆ. ಮಂಗನ ಬಾಲದಂತಹಾ ಬೇರುಗಳನ್ನು ಇಳಿಸುವ ಕಾರಣ ಅಥವಾ ಮಂಗಗಳು ಆಸೆಯಿಂದ ತಿನ್ನುವ ಕಾರಣ ಇದು ಮಂಗನ ಬಳ್ಳಿ.

ಮನುಷ್ಯರಿಗೆ ಅದರಲ್ಲೂ ಚಿಕ್ಕ ಮಕ್ಕಳಿಗೆ ಮಂಗಬಾವು ಎಂಬ ಗಂಟಲು ಭಾಗದಲ್ಲಿ ಉಬ್ಬುವ ಒಂದು ಮಾರಿ (ರೋಗ) ಉಂಟಾಗುತ್ತದೆ. ಅದಕ್ಕೆ ಇದರ ಬಾಲದಂತಾ ಆ ಎಳೆಗಳನ್ನ ತಂದು ಕಟ್ಟುತ್ತಾರೆ. ಮಂಗಬಾವಿಗೂ ಮಂಗನಿಗೂ ಏನು ಸಂಬಂಧವೋ ಗೊತ್ತಿಲ್ಲ. ಜನ ಮಂಗಗಳ ಬಾಲದ ರೀತಿಯ ಬೇರನ್ನೂ ಮಂಗಗಳು ಆಸೆಯಿಂದ ತಿನ್ನುವುದನ್ನೂ ನೋಡಿಯೇ ಇದರಲ್ಲಿ ಔಷಧವಿದೆಯೆಂದು ನಂಬಿರಲಿಕ್ಕೆ ಸಾಕು.

ಅಂದಹಾಗೆ ಇದರ ಸಸ್ಯಶಾಸ್ತ್ರೀಯ ಹೆಸರು ಮೆನಿಸ್ಪರ್ಮೇಶಿಯೆ. ಹಳದಿ ಬಣ್ಣದ ಹೂಗುಗುಚ್ಛಗಳು ಹೇರಳವಾಗಿ ಬಿಡುವ ಇದು ಕೆಂಪು ಹಣ್ಣುಗಳನ್ನು ಬಿಡುತ್ತದೆ‌. ಬೇಲಿ ಗಿಡಗಂಟೆಗಳು ಎಲ್ಲೆಂದರಲ್ಲಿ ಪುಷ್ಕಳವಾಗಿ ಇದು ಹಬ್ಬಿ ಬೆಳೆಯುತ್ತದೆ. ಮನೆ ಮಹಡಿಗಳಲ್ಲಿ ಮಣ್ಣಿನ ಪಾಟಿನಲ್ಲೂ ಬೆಳೆಸಬಹುದು. ಹಚ್ಚಹಸುರಿನ ಎಲೆಗಳಿಂದ ಮನೆಯ ಸೌಂದರ್ವನ್ನೂ ಹೆಚ್ಚಿಸುತ್ತದೆ‌.

ಹೇರಳವಾದ ಲವ್ ಮಾರ್ಕ್ ಎಲೆಗಳನ್ನು ಬಳ್ಳಿಯ ತುಂಬಾ ಚೆಲ್ಲುತ್ತದೆ. ಬಳ್ಳಿಯ ಎಲೆ ಬೇರು ಹಣ್ಣು ಎಲ್ಲವೂ ಅಮೃತವೇ…

  • ಸುರೇಶ್ ಎನ್  ಶಿಕಾರಿಪುರ, ಬಹುಮುಖಿ ಚಿಂತಕರು

Share:

Leave a Reply

Your email address will not be published. Required fields are marked *

More Posts

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ

On Key

Related Posts

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಭಕ್ತಿ ಪಂಥ ‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ