March 25, 2023 3:55 pm

ಖಾಸಗಿಯಲ್ಲಿ ಮೀಸಲಾತಿ ಜಾರಿಯಾಗಲಿ

೨೦೦೪ರಲ್ಲಿ ಖಾಸಗಿ ರಂಗದಲ್ಲಿ ಮೀಸಲಾತಿ ಕುರಿತು ಯುಪಿಎ ಸರ್ಕಾರ ಪ್ರಸ್ತಾಪಿಸಿತು. ಆದರೆ ಆಕಾಶವೇ ಕಳಚಿ ಬಿದ್ದಂತೆ ಖಾಸಗಿ ಕಂಪೆನಿಗಳು ಹುಯಿಲೆಬ್ಬಿಸಿದವು.

ಭಾರತದಲ್ಲಿ ಮೀಸಲಾತಿ ಬ್ರಿಟಿಷ್ ಸರ್ಕಾರದಿಂದ ಅಧಿಕೃತವಾಗಿ ಜಾರಿಗೆ ಬಂದದ್ದು ೧೯೦೮ರಲ್ಲಿ. ಅದಕ್ಕಿಂತ ಪೂರ್ವದಲ್ಲಿ (೧೮೮೧) ಜ್ಯೋತಿಬಾ ಫುಲೆ ಕಡ್ಡಾಯ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿಗಾಗಿ ಒತ್ತಾಯಿಸಿದ್ದರು. ೧೯೦೨ರಲ್ಲಿ ಶಾಹು ಮಹರಾಜ್ ತಮ್ಮ ಸಂಸ್ಥಾನದಲ್ಲಿ ಮೀಸಲಾತಿಯನ್ನು ಜಾರಿಗೆ ತಂದಿದ್ದರು. ಇದರ ಜತೆಗೆ ಮೈಸೂರು ಅರಸರೂ ಮೀಸಲಾತಿ ಪರವಾಗಿದ್ದರು.

ಈ ಆಧಾರದ ಪ್ರಕಾರ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಜಾರಿಗೆ ಒತ್ತಾಯ ಮತ್ತು ಆರಂಭವಾಗಿ ಇನ್ನೂ ೧೩೮ ವರ್ಷಗಳಷ್ಟೇ ಆಗಿದೆ. ಅದು ಜಾರಿಯಾಗಿ ೧೧೧ ವರ್ಷಗಳು ಕಳೆದಿವೆ. ಆದರೆ ಭಾರತದ ಚರಿತ್ರೆ ಆರಂಭವಾದ ದಿನದಿಂದ ಇಂದಿನವರೆಗೆ ಅನೈಚ್ಛಿಕವಾಗಿ ಜಾರಿಯಲ್ಲಿರುವ ಮೀಸಲಾತಿಯನ್ನು ಇದುವರೆಗೆ ಯಾರೂ ವಿರೋಧಿಸುವುದಿಲ್ಲ. ವರ್ಣಾಶ್ರಮವನ್ನು ಆಧರಿಸಿ ಶ್ರಮ ವಿಭಜಿಸಿದ ಕಾರಣದಿಂದ ಮೇಲ್ವರ್ಗದವರಿಗೆ ಸೀಮಿತವಾಗಿದ್ದ ಅಧಿಕಾರ, ಆಸ್ತಿ, ಸಂಪತ್ತಿನ ಒಡೆತನವನ್ನು ಅನುಭವಿಸಿರುವವರು ಇಂದಿಗೂ ಆರಾಮವಾಗಿದ್ದಾರೆ. ಆರಂಭದಿಂದಲೂ ದಮನಿತರಿಗೆ ಅಕ್ಷರ ಜ್ಞಾನವನ್ನೂ ಒಳಗೊಂಡಂತೆ ಯಾವುದರ ಮೇಲೂ ಅಧಿಕಾರವಿರಲಿಲ್ಲ. ಇವರಲ್ಲಿ ಬಹುಪಾಲು ಮಂದಿ ಇನ್ನೂ ಆದಿಮ ಸ್ಥಿತಿಯಲ್ಲೇ ಜೀವಿಸುತ್ತಿದ್ದಾರೆ.

ಕೇವಲ ೧೧೧ ವರ್ಷಗಳ ಮೀಸಲಾತಿ ಜಾರಿಗೆ ಬಂದು ಅದೂ ಕಟ್ಟುನಿಟ್ಟಾಗಿ ಜಾರಿಯಾಗಲೇಬೇಕೆಂದು ನ್ಯಾಯಾಲಯಗಳು ಆಜ್ಞೆ ಹೊರಡಿಸಿದ ನಂತರ ಕೆಲವೇ ದಶಕಗಳಿಂದ ಸರ್ಕಾರದಿಂದ ನಿಗದಿತ ಪ್ರಮಾಣದ ಮೀಸಲಾತಿಯನ್ನು ಅನುಸರಿಸಲಾಗುತ್ತಿದೆ. ಆದರೆ ಇದರ ಅರಿವಿಲ್ಲದವರಂತೆ ವರ್ತಿಸುತ್ತಿರುವ ಮೀಸಲಾತಿ ವಿರೋಧಿಗಳು ದೇಶದ ಕರಾಳ ಇತಿಹಾಸವನ್ನು ಉದ್ದೇಶಪೂರ್ವಕವಾಗಿ ಮರೆಯುತ್ತಾರೆ.   ದುರಂತವೆಂದರೆ ಮೀಸಲಾತಿ ವಿರೋಧಿಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ ಸೇರಿದವರ ಪಾಲು ಹೆಚ್ಚಿರುವುದು.

ಶಂಬೂಕ, ಏಕಲವ್ಯರ ಪಾಂಡಿತ್ಯವನ್ನು ನಿರುಪಯುಕ್ತಗೊಳಿಸಲು ನಡೆಸಿರುವ ಹುನ್ನಾರವನ್ನು ಈ ಶೂದ್ರ ಸಮುದಾಯದವರು ಮರೆತಿದ್ದಾರೆ. ವಿದ್ಯಾಭ್ಯಾಸದಲ್ಲಿ ಎಲ್ಲರಿಗೂ ಅವಕಾಶ ಮುಕ್ತವಾಗಿದೆಯಾದರೂ ಉದ್ಯೋಗದಲ್ಲಿ ಈ ಅವಕಾಶ ಎಲ್ಲರಿಗೂ ಅಷ್ಟು ಸುಲಭವಾಗಿ ಸಿಗುವುದು ಸಾಧ್ಯವಿಲ್ಲ. ಇದುವರೆಗೆ ಶಿಕ್ಷಣ, ಅಧಿಕಾರ, ಅಂತಸ್ತು ಹಾಗೂ ಆಸ್ತಿ ಸಂಪಾದಿಸಿರುವವರಿಗೆ ತಂತಾನೇ ಅವಕಾಶಗಳ ದಿಡ್ಡಿಬಾಗಿಲು ತೆರೆದುಕೊಂಡಿದ್ದರೆ, ಈ ಯಾವುದೂ ಇಲ್ಲದವರು ಮತ್ತೆ ಉದ್ಯೋಗಕ್ಕಾಗಿ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಶಂಬೂಕನ ತಲೆ ಕತ್ತರಿಸಿ ಅವನ ಜ್ಞಾನ ಅವನ ಸಮುದಾಯಕ್ಕೆ ಸಿಗದಂತೆ, ಏಕಲವ್ಯನ ಬೆರಳು ಕತ್ತರಿಸುವ ಮೂಲಕ ಅವನ ಜ್ಞಾನವನ್ನೇ ಇಲ್ಲವಾಗಿಸಿದ್ದಕ್ಕಿಂತ ಭೀಕರ ಸನ್ನಿವೇಶಗಳನ್ನು ಆಧುನಿಕ ಸಂದರ್ಭದಲ್ಲಿ ಸೃಜಿಸಲಾಗಿದೆ. ಹೇಗೆಂದರೆ ವಿದ್ಯಭ್ಯಾಸ ಪಡೆದ ತಳಸಮುದಾಯದ ಪ್ರತಿಭಾವಂತರಿಗೆ ತಮ್ಮ ಪರವಾಗಿ ಕರ್ತವ್ಯ ನಿರ್ವಹಿಸುವವರ ಬೆಂಬಲವಿಲ್ಲದೆ ಅವರ ವಿದ್ಯೆ ಅನುಪಯುಕ್ತವಾಗುವಂತೆ ವ್ಯವಸ್ಥಿತ ಸಂಚು ರೂಪಿಸಲಾಗಿದೆ. ಭವಿಷ್ಯದಲ್ಲಿ ಅವರು ಓದಿದ್ದೇ ವ್ಯರ್ಥ ಎಂಬ ನಿರ್ಧಾರಕ್ಕೆ ಬರಲು ಪ್ರೇರಣೆ ನೀಡಲಾಗುತ್ತಿದೆ. ಇದರ ಮುಂದುವರೆದ ರೂಪವನ್ನೇ ಈಗಲೂ ಹೊಸರೂಪದಲ್ಲಿ ಅಸ್ತಿತ್ವದಲ್ಲಿಡಲು ಈ ಮೇಲ್ವರ್ಗ ಹಗಲಿರುಳೂ ಕಾರ್ಯನಿರತವಾಗಿರುವಂತಿದೆ. ಮೀಸಲಾತಿ ವಿರೋಧಕ್ಕೆ ಪೂರಕ ಜನಾಭಿಪ್ರಾಯ ರೂಪಿಸುವಲ್ಲಿ ಕೂಡ ಯಶಸ್ವಿಯಾಗಿರುವುದು ಇದಕ್ಕೆ ನಿದರ್ಶನ.

ಇನ್ನು ಗ್ಯಾಟ್, ವಿದೇಶಿ ನೇರ ಬಂಡವಾಳ ಹೂಡಿಕೆ ಒಪ್ಪಂದ, ಬಂಡವಾಳ ಹಿಂತೆಗೆತ ಮೊದಲಾದವುಗಳಿಂದ ದೇಶದಲ್ಲಿ ಸರ್ಕಾರಿ ಉದ್ಯೋಗಗಳ ಲಭ್ಯತೆ ಕನಿಷ್ಠಮಟ್ಟಕ್ಕೆ ಕುಸಿಯಲಿದೆ. ಮೀಸಲಾತಿ ವಿರೋಧಿಗಳು ಇದನ್ನು ಯಶಸ್ವಿಯಾಗಿ ಆಗುಮಾಡುತ್ತಿದ್ದಾರೆ. ರೋಗಗ್ರಸ್ಥತೆಯ ಹೆಸರಿನಲ್ಲಿ ಹಂತಹಂತವಾಗಿ ಸರ್ಕಾರಿ ಕೈಗಾರಿಕೆ, ಉದ್ಯಿಮೆಗಳನ್ನು ಮುಚ್ಚುತ್ತಿರುವ ಹೊತ್ತಿನಲ್ಲಿ ಖಾಸಗಿ ಕೈಗಾರಿಕೆಗಳು ಹಾಗೂ ಉದ್ಯಿಮೆಗಳು ಸಾವಿರಾರು ಕೋಟಿ ರೂ.ಗಳ ಲಾಭ ಗಳಿಸುತ್ತಿವೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಖಾಸಗಿ ಉದಿಮೆಗಳನ್ನುಳಿದು ಸರ್ಕಾರದ ಯಾವುದೇ ಕೈಗಾರಿಕೆಗಳೂ ಅಸ್ತಿತ್ವದಲ್ಲಿರುವುದು ಸಾಧ್ಯವಿಲ್ಲ.ಆದ್ದರಿಂದ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ಜಾರಿಗೆ ತರಬೇಕಿದೆ. ಭಾರತದಲ್ಲಿ ದಕ್ಷ ಕೆಲಸಗಾರರಿಗೆ ಕೊರತೆ ಇಲ್ಲ. ಆದರೆ ಸ್ವಜಾತಿಯ ಕಾರಣದಿಂದ ದಕ್ಷತೆ ಮತ್ತು ಅದಕ್ಷತೆಯನ್ನು ಅಳೆಯುವ ಕೆಲಸ ಸದ್ಯಕ್ಕೆ ಅಸ್ತಿತ್ವದಲ್ಲಿದೆ. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಕಡ್ಡಾಯವಾಗಿ ಜಾರಿಗೆ ಬಂದಲ್ಲಿ ಈಗ ವಿದ್ಯಾಭ್ಯಾಸದಲ್ಲಿ ಇರುವ ಸ್ಪರ್ಧೆ ಉದ್ಯೋಗ ಕ್ಷೇತ್ರದಲ್ಲೂ ಏರ್ಪಟ್ಟು ಎಲ್ಲರಿಗೂ ಉದ್ಯೋಗದ ಅವಕಾಶ ನಿರ್ಮಾಣವಾಗಬಹುದು.

ಡಾ. ಪ್ರದೀಪ್ ಮಾಲ್ಗುಡಿ, ಪತ್ರಕರ್ತ, ಸಂಶೋಧಕ

Share:

Leave a Reply

Your email address will not be published. Required fields are marked *

More Posts

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ

On Key

Related Posts

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಭಕ್ತಿ ಪಂಥ ‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ