ಸನ್ಮಾನ್ಯ ಸತೀಶ ಜಾರಕಿಹೊಳಿ ಅವರ ನೇತೃತ್ವದ ಮಾನವ ಬಂಧುತ್ವ ವೇದಿಕೆ – ಕರ್ನಾಟಕ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ರಾಜ್ಯ ಮಟ್ಟದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ಮರಾಠಿ ಭಾಷೆಯಲ್ಲಿ ಭಾಗವಹಿಸಬಹುದು.
ನಿಯಮಗಳು
ಪ್ರಬಂಧ
1. ಪ್ರಬಂಧವು 1000 ಪದಗಳ ಮಿತಿ ಒಳಗೆ ಇರಬೇಕು ಅಥವಾ ಮೂರು ಪುಟಗಳನ್ನು ಮೀರಬಾರದು.
2. ಕೈಬರಹದ ಪ್ರಬಂಧಗಳನ್ನು ಮಾತ್ರ ಸ್ವೀಕರಿಸಲಾಗುವುದು.
3. ಸ್ಪರ್ಧೆಯಲ್ಲಿ ಭಾಗವಹಿಸುವವರು ಹೆಸರು, ವಯಸ್ಸು, ಪೂರ್ಣ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಪ್ರತ್ಯೇಕ ಪುಟದಲ್ಲಿ ಲಗತ್ತಿಸುವುದು ಕಡ್ಡಾಯ.
ಭಾಷಣ
1. ಫೇಸ್ ಬುಕ್ (Facebook) ಮೂಲಕ ರಾಜ್ಯ ಮಟ್ಟದ ಭಾಷಣ ಸ್ಪರ್ಧೆ.
2. 10 ನಿಮಿಷಗಳಿಗೆ ಮೀರದಂತೆ, ವಿಡಿಯೋ ಮಾಡಿ ನಿಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಬೇಕು. ಫೇಸ್ ಬುಕ್ ಖಾತೆ ಇಲ್ಲದಿದ್ದಲ್ಲಿ ವಾಟ್ಸಪ್ ಮಾಡಬೇಕು.
3. ಭಾಷಣ ಪ್ರಾರಂಭದ ಮೊದಲು ಹೆಸರು ಹೇಳುವುದು ಕಡ್ಡಾಯ.
4. ಫೇಸ್ಬುಕ್ಗೆ ಅಪ್ಲೋಡ್ ಮಾಡಿದ ವಿಡಿಯೋವನ್ನು ಕಡ್ಡಾಯವಾಗಿ ಹೆಸರು, ಪೂರ್ಣ ವಿಳಾಸ ಹಾಗೂ ದೂರವಾಣಿ ಸಂಖ್ಯೆ ಸಮೇತ ಈ ವಾಟ್ಸಪ್ ನಂಬರ್ಗೆ ಕಳುಹಿಸಬೇಕು – 9535372799. ಸ್ವೀಕರಿಸಿದ ವಿಡಿಯೋಗಳನ್ನು ಮಾನವ ಬಂಧುತ್ವ ವೇದಿಕೆ – ಕರ್ನಾಟಕ ಫೇಸ್ಬುಕ್ ಪೇಜ್ ನಲ್ಲಿ ಅಪ್ಲೋಡ್ ಮಾಡಲಾಗುವುದು.
5. ಭಾಷಣವನ್ನು ಪೋಸ್ಟ್ ಮಾಡುವ ಮುನ್ನ #manavabandhutvavedike ಹ್ಯಾಷ್ ಟ್ಯಾಗ್ ಬಳಸಿ ಪೋಸ್ಟ್ ಮಾಡಿ.
ವಿಶೇಷ ಸೂಚನೆಗಳು
1. ಸ್ಪರ್ಧೆಗಳು ಕರ್ನಾಟಕಕ್ಕೆ ಮಾತ್ರ ಸೀಮಿತ.
2. ಕನ್ನಡ, ಇಂಗ್ಲೀಷ್, ಹಿಂದಿ ಮತ್ತು ಮರಾಠಿ ಭಾಷೆಯಲ್ಲಿ ಪ್ರಬಂಧ ಹಾಗೂ ಭಾಷಣವನ್ನು ಆಹ್ವಾನಿಸಲಾಗಿದೆ.
3. ಸ್ಪರ್ಧೆಗಳಿಗೆ ವಯೋಮಿತಿ ಇಲ್ಲ.
4. ಪ್ರಬಂಧ ಹಾಗೂ ಭಾಷಣವು ಸ್ವಂತದ್ದಾಗಿರಬೇಕು.
5. ಆಯ್ಕೆಯಾದ 10 (ಭಾಷಣಕ್ಕೆ 05, ಪ್ರಬಂಧಕ್ಕೆ 05)ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಮತ್ತು ಸತೀಶ ಜಾರಕಿಹೊಳಿಯವರೊಂದಿಗೆ ಹೆಲಿಕಾಪ್ಟರ್ನಲ್ಲಿ ವಿಹಾರಕ್ಕೆ ಅವಕಾಶ ಕಲ್ಪಿಸಲಾಗುವುದು.
6. ಸ್ಪರ್ಧೆಗಳಿಗೆ ಕೊನೆಯ ದಿನಾಂಕ: 30 ಮಾರ್ಚ್ 2021. ನಂತರ ಬಂದ ಪ್ರಬಂಧ ಹಾಗೂ ಭಾಷಣಗಳನ್ನು ಯಾವುದೇ ಕಾರಣಕ್ಕೂ ಸ್ಪರ್ಧೆಗೆ ಪರಿಗಣಿಸುವುದಿಲ್ಲ.
7. ಪ್ರಬಂಧ ಕಳುಹಿಸುವ ವಿಳಾಸ: ಮಾನವ ಬಂಧುತ್ವ ವೇದಿಕೆ-ಕರ್ನಾಟಕ, ಕೇಂದ್ರ ಕಚೇರಿ, 1ನೇ ಮಹಡಿ, ಶಿವಕೃಪಾ ಬಿಲ್ಡಿಂಗ್, ಕೊಲ್ಲಾಪುರ ಸರ್ಕಲ್ ಹತ್ತಿರ, ಸಾಯಿ ಸಂಗಮ್ ಹೊಟೇಲ್ ಹಿಂಭಾಗ, ನೆಹರು ನಗರ, ಬೆಳಗಾವಿ – 590010
8. ತೀರ್ಪುಗಾರರ ತೀರ್ಮಾನವೇ ಅಂತಿಮ.
9. ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು.