ಬೆಂಗಳೂರು: ಸತೀಶ್ ಜಾರಕಿಹೊಳಿಯವರು ಸ್ಥಾಪಿಸಿದ ಮಾನವ ಬಂಧುತ್ವ ವೇದಿಕೆ – ಕರ್ನಾಟಕ ವತಿಯಿಂದ 5 ದಿನಗಳ ಕಾಲ ಉಚಿತ ಪವಾಡ ಬಯಲು ತರಬೇತಿಯನ್ನು ನೀಡಲಾಗುತ್ತಿದೆ. ಉತ್ಸಾಹಿ ಯುವಜನಾಂಗ, ಮೂಢನಂಬಿಕೆ ವಿರುದ್ಧ ಜನಜಾಗೃತಿ ಮತ್ತು ಸಮಸಮಾಜ ನಿರ್ಮಾಣದ ನಿಟ್ಟಿನಲ್ಲಿ ಹೆಜ್ಜೆ ಇಡುವ ಆಸಕ್ತರಿಗೆ ಅವಕಾಶ. ನುರಿತ ಪವಾಡ ಬಯಲು ತಜ್ಞ ಡಾ.ಹುಲಿಕಲ್ ನಟರಾಜ್ ಅವರು ತರಬೇತಿಯನ್ನು ನೀಡಲಿದ್ದಾರೆ.
ಈ ಕೆಳಗಿನ ಗೂಗಲ್ ಫಾರಂ ಅನ್ನು ತುಂಬುವ ಮೂಲಕ ಪವಾಡ ಬಯಲು ತರಬೇತಿಗೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ಕರೆಮಾಡಿ ತರಬೇತಿ ನಡೆಯುವ ಸ್ಥಳ ಮತ್ತು ದಿನಾಂಕವನ್ನು ತಿಳಿಸಲಾಗುವುದು.