December 3, 2023 6:28 am

ಬಹುಜನ ಭಾರತ ಬಹುತ್ವ ಭಾರತ ಮುಳುಗುತ್ತಿದೆ

ನಮ್ಮ ಸಮುದಾಯಗಳಿಗೆ ಯಾವುದು ಆದ್ಯತೆಯಾಗಬೇಕಿತ್ತೋ ಅದು ಕಾಲ ಕಸಕ್ಕಿಂತ ಕಡೆಯಾಗಿದೆ‌. ಯಾವುದು ಮುಂದೆ ಅವರನ್ನು ಆಹುತಿ ತೆಗೆದುಕೊಳ್ಳಲಿದೆಯೋ ಅದರ ಮೋಹದ ಮತ್ತೇ ಸುಖವಾಗಿದೆ. ಈಗಾಗಲೇ ಇವರ ಅಸ್ತಿತ್ವದ ಗೋಣಿಗೆ ಪುರೋಹಿತಶಾಹಿ ಮತ್ತು ಬಂಡವಾಳಶಾಹಿ ಕುಡುಗೋಲು ಇಟ್ಟಿದೆ. ಬಹಳೇ ಜನ ಬಾಬಾಸಾಹೇಬರ ಬಗ್ಗೆ ತೆವಲಿಗಾಗಿ ಮಾತಾಡೋದು, ದಿನಾಚರಣೆಗಳನ್ನ ಆಚರಿಸೋದು. ಬಾಬಾ ಸಾಹೇಬರ ಚಿಂತನೆಗಳನ್ನ ಅವರು ಹಾಕಿದ ಬುನಾದಿಯನ್ನ ನಾಶ ಮಾಡಲು ಹೊರಟಿರುವ ದುಷ್ಟ ಶಕ್ತಿಗಳ ಜೊತೆ ಕೈಜೋಡಿಸೋದು. ಇದರಿಂದ ಅಂಬೇಡ್ಕರರಿಗೇನೂ ನಷ್ಟವಿಲ್ಲ. ಎಲ್ಲಾ ದಲಿತ ಶೂದ್ರ ಹಿಂದುಳಿದ ಸಮುದಾಯಗಳಿಗೇ ಆಪತ್ತು. ಈಗ ಈ ಸಮುದಾಯಗಳು ಆಪತ್ತಿನ ಹೊಸ್ತಿಲಲ್ಲಿದ್ದಾವೆ. ಗೋಶಾಲೆ ಮಾಡಿ ದನಾ ಕಾಯ್ಕೊಂಡು ಇರಲಿ ಬಿಡಿ. ಪುರೋಹಿತರ ಬಾಡಿಗಾರ್ಡುಗಳಾಗಿ ಗೇಟ್ ಕೀಪರ್ಗಳಾಗಿ ಕಳೆದು ಹೋದ ತಮ್ಮ ಹಳೆಯ ಬದುಕನ್ನ ನೆನೆಸಿಕೊಂಡು ಮುಂದೆ ಪ್ರಾಪ್ತವಾಗಲಿರುವ ನರಕದ ಎಣ್ಣೆಕೊಪ್ಪರಿಗೆಯಲ್ಲಿ ಬೇಯಲಿ ಬಿಡಿ.

ದಲಿತರಿಗೆ ಸರ್ಕಾರಿ ನೌಕರಿ ಸ್ಥಾನಮಾನ ಗೌರವ ಮನ್ನಣೆಗಳನ್ನು ಆರ್ಥಿಕ ಸಬಲತೆಯನ್ನು ತಂದುಕೊಟ್ಟದ್ದು ಭಾರತೀಯ ಸಂವಿಧಾನ ಮತ್ತು ಪ್ರಜಾಪ್ರಭುತ್ವವಾದೀ ಸಮಾಜವಾದಿ ಸಮತಾವಾದಿ ರಾಜಕೀಯ ವ್ಯವಸ್ಥೆಯೇ ಹೊರತು, ಹಿಂದುತ್ವವಲ್ಲ ಗೋವುಗಳಲ್ಲ ರಾಮಮಂದಿರವಲ್ಲ ಗೋಡ್ಸೆ ಗೋಳ್ವಲಾಲ್ಕರ್ ಅಲ್ಲ.

ಈ ಸರಳ ಸತ್ಯ ಅರ್ಥ ಮಾಡಿಕೊಳ್ಳಲಾಗದ ಶೂದ್ರ ಮತ್ತು ದಲಿತ (ಮಹಿಳೆಯೂ ದಲಿತಳೇ ಆಕೆಯನ್ನೂ ಸೇರಿ) ಸಮುದಾಯಗಳು ಅಧಃಪತನದ ಹಾದಿಯಲ್ಲಿ ಕಸಾಯಿಖಾನೆಯ ಕಡೆ ಚಲಿಸುವ ನಿಜವಾದ ಗೋವುಗಳೇ ಆಗಿವೆ. ಸುಪ್ರೀಂ ಕೋರ್ಟ್  ಮೊನ್ನೆ ಮೀಸಲಾತಿಯನ್ನು ಪ್ರಶ್ನಿಸಿದೆ. ಇಲ್ಲಿ ಸಮಾಜದಲ್ಲಿ ಜಾತಿಯೇ ನಾಶವಾಗಿಲ್ಲ. ಜಾತಿ ಬಾಣಲೆಯಲ್ಲಿ ದಲಿತರು ಶೂದ್ರರು ಬೇಯುವುದು ತಪ್ಪಿಲ್ಲ‌. ಅಲೆಮಾರಿಗಳು ಅಲೆಯುತ್ತಲೇ ಇದ್ದಾರೆ. ದಲಿತ ಮಹಿಳೆಯ ಸಾಮೂಹಿಕ ಅತ್ಯಾಚಾರ ನಡೆಯುತ್ತಲೇ ಇದೆ. ದೇವಾಲಯ ಪ್ರವೇಶ ನಿಷೇಧ, ಅಂತರ್ಜಾತಿ ವಿವಾಹವಾದರೆ ಅವಮರ್ಯಾದಾ ಹತ್ಯೆ, ಲೈಂಗಿಕ ದುರ್ಬಳಕೆ ಅಥವಾ ದಾಸ್ಯಕ್ಕೆ ಒಳಪಡಿಸಿರುವುದು, ಅನಕ್ಷರತೆ ದಾರಿದ್ರ್ಯ ಬಡತನಗಳು ಕಿತ್ತು ತಿನ್ನುತ್ತಿವೆ. ಅತ್ತ ಕೋರ್ಟ್ ಮೀಸಲಾತಿಯನ್ನು ಪ್ರಶ್ನಿಸಿದೆ. ಮಾಧ್ಯಮಗಳು ಅದನ್ನು ‘ಮಹತ್ವದ ಪ್ರಶ್ನೆ’ ಎಂಬ ಟೈಟಲ್ ಅಡಿಯಲ್ಲಿ ಸುದ್ಧಿ ಮಾಡುತ್ತವೆ‌. ಅಂದರೆ ಮೀಸಲಾತಿ ತೆಗೆಯುವುದು ಮಹತ್ವದ ಪ್ರಶ್ನೆ. ವಿದ್ಯಾವಂತ ಶೂದ್ರರು ದಲಿತರು ಯುವಕರು ಜಾತಿ ಧರ್ಮದ ಮಂಪರಿನಿಂದ ಹೊರಬಂದು ಇದನ್ನು ನೋಡಲು ಅರ್ಥ ಮಾಡಿಕೊಳ್ಳುವ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ತಯಾರಿಲ್ಲ‌.

ಚರಿತ್ರೆಯ ಉದ್ದಕ್ಕೂ ನಾವು ಸೋತಿದ್ದು ಪುರೋಹಿತಶಾಹಿ ಬಲಪಂಥೀಯರಿಂದ ಅಲ್ಲ. ನಮ್ಮದೇ ದೌರ್ಬಲ್ಯಗಳಿಂದ. ನಮ್ಮ ಸ್ವಾರ್ಥ, ಗುಲಾಮ ಮನಸ್ಥಿತಿ, ಹುಂಬತನ, ಅಂಧಾರಾಧನೆ, ಮೌಢ್ಯ, ಅನಕ್ಷರತೆ, ಅನೈಕ್ಯತೆ ಇವುಗಳಿಂದಲೇ. ಕನಕದಾಸರು, ‘ಹಿಂಡನಗಲಿದ ಗೋವು ಹುಲಿಗಿಕ್ಕಿದ ಮೇವು’ ಎಂದೆನ್ನುವ ಹಾಗೆ ಒಟ್ಟಾಗಿರಲೊಲ್ಲದ ನಾವು ಹುಲಿಗಿಕ್ಕಿದ ಮೇವಲ್ಲ ನಾವೇ ಹುಲಿಗೆ ಬಲಿಯಾಗ ಹೊರಟಿರುವ ದಡ್ಡರು. ರೆಕ್ಕೆ ಕತ್ತರಿಸಿ ಹಾಕಿದರೂ ಹಕ್ಕಿ ಹಾರುವ ಯತ್ನ ನಿಲ್ಲಿಸುವುದಿಲ್ಲ ಸಾಯುವವರೆಗೂ ಹಾರುವ ಕನಸು ಕಾಣುತ್ತಲೇ, ಹಾರಲು ಪ್ರಯತ್ನಿಸುತ್ತಲೇ ಕೊನೆಯುಸಿರೆಳೆಯುತ್ತದೆ.

ನಮಗೆ ಹಕ್ಕಿಗಿರುವ ಸ್ವಾತಂತ್ರ್ಯದ ಪ್ರೇಮವಿಲ್ಲ ಪ್ರಯತ್ನವಿಲ್ಲ. ಯಾಕೆಂದರೆ ಸ್ವಾತಂತ್ರವೆಂದರೇನು ಬಿಡುಗಡೆಯೆಂದರೇನು ಸ್ವಾಭಿಮಾನವೆಂದರೇನು ಬದುಕುವ ಹಕ್ಕು ಎಂದರೇನು, ಸಮಾನತೆ ಎಂದರೇನು ಎಂಬ ಪ್ರಶ್ನೆಗಳೇ ಏಳದಂತೆ ನಮ್ಮ ಸಮುದಾಯಗಳ ಮಿದುಳನ್ನು ಪುರೋಹಿತಶಾಹಿ ಹೊಸೆದು ರೂಪಿಸುತ್ತದೆ. ನಮ್ಮ ಸಮುದಾಯಗಳಿಗೆ ನಮ್ಮ ಸಮುದಾಯಗಳ ನಾಯಕರುಗಳೇ ವಂಚಿಸಿದ್ದಾರೆ, ದಲಿತ ಶೂದ್ರ ಜನಾಂಗದ ಉನ್ನತ ಅಧಿಕಾರಿಗಳೇ ಕೈ ಬಿಟ್ಟಿದ್ದಾರೆ. ಪ್ರಶಸ್ತಿಗಾಗಿ ಅಧಿಕಾರಕ್ಕಾಗಿ ಹೆಂಡಕ್ಕಾಗಿ ವೈಯಕ್ತಿಕ ಲಾಭಕ್ಕಾಗಿ, ತಮ್ಮನ್ನು ತಾವೇ ಮಾರಿಕೊಂಡ, ಅಡವಿಟ್ಟುಕೊಂಡ, ರಾಜಕಾರಣಿಗಳು, ಹೋರಾಟಗಾರರು, ಅಧಿಕಾರಿಗಳು, ಸಂಘಟನೆಗಳು ನಮ್ಮಲ್ಲಿವೇ. ಈ ಶತ್ರುಗಳೇ ಈ ವಿದ್ರೋಹಿಗಳೇ ಇಂದು ತಮ್ಮ ತಮ್ಮ ಸಮುದಾಯಗಳನ್ನು ಕೈಬಿಟ್ಟು ನವಬ್ರಾಹ್ಮಣರಾಗಿ ಢೋಂಗಿ ಭಾಷಣಕಾರರಾಗಿ, ಢೋಂಗಿ ವಿಚಾರವಾದಿಗಳಾಗಿ ಕವಿಗಳಾಗಿ ಮುಖಂಡರಾಗಿ ತಾವೇ ಮುಂಚೂಣಿಯಲ್ಲಿ ನಿತ್ತು ದಿಕ್ಕುತಪ್ಪಿಸುತ್ತಿದ್ದಾರೆ‌.

ಇವರೆಲ್ಲ ಅಂಬೇಡ್ಕರ್ ಎಳೆದ ತೇರನ್ನು ಮುಂದೆ ಎಳೆಯಲಾರರು. ಹಾಗೆಯೇ ಇದ್ದರೆ ಇರಲಿ ಎಂದೂ ಕೈ ಬಿಡಲೊಲ್ಲರು. ಬದಲಿಗೆ ತೇರಿನ ಅಚ್ಚನ್ನೇ ಮುರಿಯುವ ದುರುಳತನ ಬೆಳೆಸಿಕೊಂಡಿದ್ದಾರೆ. ಅಂಬೇಡ್ಕರ್ ಅವರಿಗೂ ಹಾಗೂ ಭಾರತದ ಸಂವಿಧಾನಕ್ಕೂ ದ್ರೋಹ ಎಸಗುತ್ತಿರುವವರು ಸಾಮಾನ್ಯ ದಲಿತ ಶೂದ್ರ ಜನರಲ್ಲ. ಅವರೊಳಗಿನ ಕೆಲವು ಡೋಂಗಿಗಳು. ಹೀಗೆ ಪುರೋಹಿತ ಮತ್ತು ಬಂಡವಾಳಶಾಹಿ ಹಾಗೂ ನಮ್ಮ ಸಮುದಾಯಗಳ ನಂಬಲರ್ಹವಲ್ಲದ ಕೆಲವು ಅವಕಾಶವಾದಿಗಳು ಈ ಎರಡೂ ಕಡೆಯ ವಿದ್ರೋಹಗಳಿಂದ ಭಾರತದ ಬಹುಜನರ ಬಾಳು ಬಹುತ್ವ ಭಾರತ ಮುಳುಗುತ್ತಿದೆ.

– ಸುರೇಶ ಎನ್ ಶಿಕಾರಿಪುರ, ಬಹುಮುಖಿ ಚಿಂತಕರು

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು