March 25, 2023 5:03 pm

ಬಾಬಾಗೌಡ ಪಾಟೀಲ ಅಂತಃಸತ್ವ ಮತ್ತು ಅಂತಃಕರಣದ ರಾಜಕಾರಣಿ

ಅಂತಃಸತ್ವ ಮತ್ತು ಅಂತಃಕರಣದ ರಾಜಕಾರಣಿ, ರೈತನಾಯಕ ಶ್ರೀ ಬಾಬಾಗೌಡ ಪಾಟೀಲರ ಅಕಾಲಿಕ ನಿಧನ ನೋವನ್ನುಂಟು ಮಾಡಿದೆ.

ಮಾನವ ಬಂದುತ್ವ ವೇದಿಕೆಯ ಜೈಕುಮಾರ್ ಮತ್ತು ಅನಂತನಾಯ್ಕ್ ಅವರೊಂದಿಗೆ, ಬಾಬಗೌಡಪಾಟೀಲರನ್ನು ಅವರ ಚಿಕ್ಕಬಾಗೇವಾಡಿಯ ಅವರ ಜಮೀನಿನಲ್ಲೇ ಮೊದಲು ಭೇಟಿಯಾದೆ. ನಂತರ ನಾಲ್ಕಾರು ದಿನಗಳ ಒಡನಾಟ ಆತ್ಮೀಯತೆಯಾಗಿ ಸ್ಮರಣೀಯವಾಗಿದೆ.

ರಾಜ್ಯದ ಮಾನವತಾವಾದಿಗಳ ಸಾಕ್ಷಿಪ್ರಜ್ಞೆಯಂತಿರುವ  ಶ್ರೀಯುತ ಸತೀಶಜಾರಕಿಹೊಳಿಯವರ  ಉಪಚುನಾವಣೆಯ ಸ್ಪರ್ಧೆಯನ್ನು  ಬಾಬಾಗೌಡಪಾಟೀಲರು ಮತ್ತು ಹಿರಿಯ ಮಾರ್ಕ್ಸ್‌ವಾದಿ ನಾಯಕ ವಿ.ಪಿ.ಕುಲಕರ್ಣಿಯವರು ಒಂದು ಜನಪರ ಹೋರಾಟದ ಮೌಲ್ಯವೆಂದೇ ಪರಿಗಣಿಸಿದ್ದರು.

ಎಪ್ಪತ್ತೈದರ ವಯೋಮಾನದ ಬಾಬಾಗೌಡ ಪಾಟೀಲ ಅವರ ಕ್ರಿಯಾಶೀಲ ವ್ಯಕ್ತಿತ್ವ, ಚುರುಕುತನ ಅವರ ವಯಸ್ಸನ್ನು ಒಂದು ದಶಕಕ್ಕೆ ಇಳಿಸಿದಂತೆ ಭಾಸವಾಗುತ್ತಿತ್ತು. ವಚನ ಚಳುವಳಿ ಮತ್ತು ವಿಜ್ಞಾನದ ಬಗ್ಗೆ ಅವರಿಗೆ ಇದ್ದ ಆಳವಾದ ಜ್ಞಾನ ಬೆರಗು ಹುಟ್ಟಿಸುವಂತಹದ್ದು. ಅವರ ಸರಳತೆ, ಸಜ್ಜನಿಕೆ ಅವರ ವ್ಯಕ್ತಿತ್ವದ ಭಾಗವಾಗಿತ್ತು.

ಹಲವಾರು ಪಕ್ಷಗಳಿಗೆ ಹೋಗಿ ಬಂದಿದ್ದ ಅವರನ್ನು ರಾಜಕೀಯ ವಲಯ ಹೇಗೆ ಗುರುತಿಸುತ್ತಿತ್ತು ಎಂಬುದು ಮುಖ್ಯವಲ್ಲ. ಆದರೆ ಗ್ರಾಮ ಭಾರತದ ಬಗ್ಗೆ ಇದ್ದ ಚಡಪಡಿಕೆಯೇ, ಪ್ರಯೋಗಗಳೇ ಅವರಿಗೆ ಹಲವಾರು ಪಕ್ಷಗಳ ಕದ ತಟ್ಟುವಂತೆ ಮಾಡಿತೇನೋ ಎನ್ನಿಸುತ್ತದೆ.

ಎಪ್ಪತ್ತರ ದಶಕದಲ್ಲಿ ಐಎಎಸ್ ಪಾಸು ಮಾಡಿದ್ದರೂ ಅವರು ಅಧಿಕಾರಶಾಹಿಯ ವ್ಯಾಮೋಹಕ್ಕೆ ಒಳಗಾಗಲಿಲ್ಲ. ಶಿವಮೊಗ್ಗೆಯ ಹಿರಿಯಗಾಂಧಿವಾದಿಗಳಾಗಿದ್ದ ಹೆಚ್.ಎಸ್.ರುದ್ರಪ್ಪ, ಎನ್.ಡಿ.ಸುಂದರೇಶ್, ಪೂರ್ಣಚಂದ್ರ ತೇಜಸ್ವಿ, ಪ್ರೊಫೆಸರ್ ನಂಜುಂಡ ಸ್ವಾಮಿಯವರ ಒಡನಾಟದಲ್ಲಿ ರಾಜ್ಯದಲ್ಲಿ ರೈತ ಚಳುವಳಿ ಕಟ್ಟುತ್ತಲೇ ಅದರ ಬೆನ್ನೆಲುಬು ಆಗಿದ್ದರು. ನಂಜುಂಡಸ್ವಾಮಿಯವರು ವಿಧಾನಸಭೆ ಪ್ರವೇಶಕ್ಕೆ ಪ್ರತ್ಯಕ್ಷ ಕಾರಣರಾಗಿದ್ದರು.

ಹಿಂದುತ್ವದ ಆಳ ಸುಳಿಯ ಅರಿಯದೇ ಬಿಜೆಪಿ ಸೇರ್ಪಡೆಯಾಗಿದ್ದ ಇವರನ್ನು ಬಿಜೆಪಿಯು ಬಳಸಿಕೊಂಡಿತ್ತು. ಗ್ರಾಮೀಣ ಅಭಿವೃದ್ಧಿಯ ಪರ ಅಪಾರ ಕಾಳಜಿ ಇದ್ದ ಬಾಬಾಗೌಡಪಾಟೀಲರು ಸಹಜವಾಗೇ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಅಂದಿನ ಪ್ರಧಾನಿ ವಾಜಪೇಯಿ ಅವರ ಆತ್ಮೀಯ ವಲಯದಲ್ಲಿದ್ದರು. ದಶಕಗಳ ನಂತರ ಆ ಪಕ್ಷ ಜನವಿರೋಧಿ, ಜನತಂತ್ರ ವಿರೋಧಿಯಾಗಿ ಇಬ್ಬರು ವ್ಯಕ್ತಿಗಳ ಮಾಫಿಯಾ ಆಗಿದ್ದರ ಬಗ್ಗೆಯೂ ಸಹಜ ಆಕ್ರೋಶ ಅವರಲ್ಲಿತ್ತು.

ಅವರ ಜೀವನ ಗಾಥೆ ಕೃತಿಯಾಗಿ ಹೊರಬಂದಿದ್ದರೆ  ರೈತಚಳವಳಿಯ ಹೆಜ್ಜೆಗುರುತುಗಳ ಮತ್ತೊಂದು ಆಯಾಮವೂ ದಾಖಲಾಗುತ್ತಿತ್ತು. ಶ್ರೀ ಬಾಬಾಗೌಡಪಾಟೀಲರ ಅಕಾಲಿಕ ಅಗಲಿಕೆಯ ನೋವು ಭರಿಸುವ ಶಕ್ತಿ ಅವರ ಬಂದುಗಳಿಗೆ ಕುಟುಂಬ ವರ್ಗದವರಿಗೆ ಬರಲಿ ಅಂತಿಮ ನಮನಗಳು.  

  • ಕೆ.ಎಸ್.ಸತೀಶ್ ಕುಮಾರ್, ಮಾನವಬಂಧುತ್ವ ವೇದಿಕೆ

Share:

Leave a Reply

Your email address will not be published. Required fields are marked *

More Posts

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ

On Key

Related Posts

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಭಕ್ತಿ ಪಂಥ ‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ