April 20, 2024 6:04 am

ಬಾಬಾಗೌಡ ಪಾಟೀಲ ಅಂತಃಸತ್ವ ಮತ್ತು ಅಂತಃಕರಣದ ರಾಜಕಾರಣಿ

ಅಂತಃಸತ್ವ ಮತ್ತು ಅಂತಃಕರಣದ ರಾಜಕಾರಣಿ, ರೈತನಾಯಕ ಶ್ರೀ ಬಾಬಾಗೌಡ ಪಾಟೀಲರ ಅಕಾಲಿಕ ನಿಧನ ನೋವನ್ನುಂಟು ಮಾಡಿದೆ.

ಮಾನವ ಬಂದುತ್ವ ವೇದಿಕೆಯ ಜೈಕುಮಾರ್ ಮತ್ತು ಅನಂತನಾಯ್ಕ್ ಅವರೊಂದಿಗೆ, ಬಾಬಗೌಡಪಾಟೀಲರನ್ನು ಅವರ ಚಿಕ್ಕಬಾಗೇವಾಡಿಯ ಅವರ ಜಮೀನಿನಲ್ಲೇ ಮೊದಲು ಭೇಟಿಯಾದೆ. ನಂತರ ನಾಲ್ಕಾರು ದಿನಗಳ ಒಡನಾಟ ಆತ್ಮೀಯತೆಯಾಗಿ ಸ್ಮರಣೀಯವಾಗಿದೆ.

ರಾಜ್ಯದ ಮಾನವತಾವಾದಿಗಳ ಸಾಕ್ಷಿಪ್ರಜ್ಞೆಯಂತಿರುವ  ಶ್ರೀಯುತ ಸತೀಶಜಾರಕಿಹೊಳಿಯವರ  ಉಪಚುನಾವಣೆಯ ಸ್ಪರ್ಧೆಯನ್ನು  ಬಾಬಾಗೌಡಪಾಟೀಲರು ಮತ್ತು ಹಿರಿಯ ಮಾರ್ಕ್ಸ್‌ವಾದಿ ನಾಯಕ ವಿ.ಪಿ.ಕುಲಕರ್ಣಿಯವರು ಒಂದು ಜನಪರ ಹೋರಾಟದ ಮೌಲ್ಯವೆಂದೇ ಪರಿಗಣಿಸಿದ್ದರು.

ಎಪ್ಪತ್ತೈದರ ವಯೋಮಾನದ ಬಾಬಾಗೌಡ ಪಾಟೀಲ ಅವರ ಕ್ರಿಯಾಶೀಲ ವ್ಯಕ್ತಿತ್ವ, ಚುರುಕುತನ ಅವರ ವಯಸ್ಸನ್ನು ಒಂದು ದಶಕಕ್ಕೆ ಇಳಿಸಿದಂತೆ ಭಾಸವಾಗುತ್ತಿತ್ತು. ವಚನ ಚಳುವಳಿ ಮತ್ತು ವಿಜ್ಞಾನದ ಬಗ್ಗೆ ಅವರಿಗೆ ಇದ್ದ ಆಳವಾದ ಜ್ಞಾನ ಬೆರಗು ಹುಟ್ಟಿಸುವಂತಹದ್ದು. ಅವರ ಸರಳತೆ, ಸಜ್ಜನಿಕೆ ಅವರ ವ್ಯಕ್ತಿತ್ವದ ಭಾಗವಾಗಿತ್ತು.

ಹಲವಾರು ಪಕ್ಷಗಳಿಗೆ ಹೋಗಿ ಬಂದಿದ್ದ ಅವರನ್ನು ರಾಜಕೀಯ ವಲಯ ಹೇಗೆ ಗುರುತಿಸುತ್ತಿತ್ತು ಎಂಬುದು ಮುಖ್ಯವಲ್ಲ. ಆದರೆ ಗ್ರಾಮ ಭಾರತದ ಬಗ್ಗೆ ಇದ್ದ ಚಡಪಡಿಕೆಯೇ, ಪ್ರಯೋಗಗಳೇ ಅವರಿಗೆ ಹಲವಾರು ಪಕ್ಷಗಳ ಕದ ತಟ್ಟುವಂತೆ ಮಾಡಿತೇನೋ ಎನ್ನಿಸುತ್ತದೆ.

ಎಪ್ಪತ್ತರ ದಶಕದಲ್ಲಿ ಐಎಎಸ್ ಪಾಸು ಮಾಡಿದ್ದರೂ ಅವರು ಅಧಿಕಾರಶಾಹಿಯ ವ್ಯಾಮೋಹಕ್ಕೆ ಒಳಗಾಗಲಿಲ್ಲ. ಶಿವಮೊಗ್ಗೆಯ ಹಿರಿಯಗಾಂಧಿವಾದಿಗಳಾಗಿದ್ದ ಹೆಚ್.ಎಸ್.ರುದ್ರಪ್ಪ, ಎನ್.ಡಿ.ಸುಂದರೇಶ್, ಪೂರ್ಣಚಂದ್ರ ತೇಜಸ್ವಿ, ಪ್ರೊಫೆಸರ್ ನಂಜುಂಡ ಸ್ವಾಮಿಯವರ ಒಡನಾಟದಲ್ಲಿ ರಾಜ್ಯದಲ್ಲಿ ರೈತ ಚಳುವಳಿ ಕಟ್ಟುತ್ತಲೇ ಅದರ ಬೆನ್ನೆಲುಬು ಆಗಿದ್ದರು. ನಂಜುಂಡಸ್ವಾಮಿಯವರು ವಿಧಾನಸಭೆ ಪ್ರವೇಶಕ್ಕೆ ಪ್ರತ್ಯಕ್ಷ ಕಾರಣರಾಗಿದ್ದರು.

ಹಿಂದುತ್ವದ ಆಳ ಸುಳಿಯ ಅರಿಯದೇ ಬಿಜೆಪಿ ಸೇರ್ಪಡೆಯಾಗಿದ್ದ ಇವರನ್ನು ಬಿಜೆಪಿಯು ಬಳಸಿಕೊಂಡಿತ್ತು. ಗ್ರಾಮೀಣ ಅಭಿವೃದ್ಧಿಯ ಪರ ಅಪಾರ ಕಾಳಜಿ ಇದ್ದ ಬಾಬಾಗೌಡಪಾಟೀಲರು ಸಹಜವಾಗೇ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಅಂದಿನ ಪ್ರಧಾನಿ ವಾಜಪೇಯಿ ಅವರ ಆತ್ಮೀಯ ವಲಯದಲ್ಲಿದ್ದರು. ದಶಕಗಳ ನಂತರ ಆ ಪಕ್ಷ ಜನವಿರೋಧಿ, ಜನತಂತ್ರ ವಿರೋಧಿಯಾಗಿ ಇಬ್ಬರು ವ್ಯಕ್ತಿಗಳ ಮಾಫಿಯಾ ಆಗಿದ್ದರ ಬಗ್ಗೆಯೂ ಸಹಜ ಆಕ್ರೋಶ ಅವರಲ್ಲಿತ್ತು.

ಅವರ ಜೀವನ ಗಾಥೆ ಕೃತಿಯಾಗಿ ಹೊರಬಂದಿದ್ದರೆ  ರೈತಚಳವಳಿಯ ಹೆಜ್ಜೆಗುರುತುಗಳ ಮತ್ತೊಂದು ಆಯಾಮವೂ ದಾಖಲಾಗುತ್ತಿತ್ತು. ಶ್ರೀ ಬಾಬಾಗೌಡಪಾಟೀಲರ ಅಕಾಲಿಕ ಅಗಲಿಕೆಯ ನೋವು ಭರಿಸುವ ಶಕ್ತಿ ಅವರ ಬಂದುಗಳಿಗೆ ಕುಟುಂಬ ವರ್ಗದವರಿಗೆ ಬರಲಿ ಅಂತಿಮ ನಮನಗಳು.  

  • ಕೆ.ಎಸ್.ಸತೀಶ್ ಕುಮಾರ್, ಮಾನವಬಂಧುತ್ವ ವೇದಿಕೆ

Share:

Leave a Reply

Your email address will not be published. Required fields are marked *

More Posts

On Key

Related Posts

ಗಾಂಧಿ – ಅಂಬೇಡ್ಕರ್ ಜುಗಲ್ಬಂದಿ 

[ 8.1.2024 ರಂದು ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರೊಂದಿಗೆ ನಡೆದ “ಗಾಂಧಿ-ಅಂಬೇಡ್ಕರ್ ಪ್ರಸ್ತುತತೆ” ಮಾತುಕತೆಯ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ವಿಸ್ತೃತ ಅಕ್ಷರ ರೂಪ]  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರನ್ನು

ನ್ಯಾಯಾಂಗದ ವಿಸ್ತರಣೆ ಮತ್ತು ಸಾಧನೆ

ಸಮಾಜದ ಜನರ ನಡುವೆ ಬೆಳೆದು ಬರುವ ವ್ಯಾಜ್ಯಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು. ಶಾಂತಿ ಇರುವೆಡೆಯಲ್ಲಿ ಅಭಿವೃದ್ಧಿ ಇರುತ್ತದೆ. ಜನರಿಗೆ ನ್ಯಾಯ ಸಿಕ್ಕಿದರೆ ತೃಪ್ತಿಪಡುತ್ತಾರೆ. ನ್ಯಾಯ ದೊರಕಿಸಿಕೊಳ್ಳುವಲ್ಲಿ ಸೋತರೆ ಅನ್ಯ ಮಾರ್ಗಗಳನ್ನು ಅನುಸರಿಸುತ್ತಾರೆ. ಮುಂದುವರೆದು ದಂಗೆಯೇಳುತ್ತಾರೆ. ಯಾವುದೇ ರೀತಿಯ ಭೇದಭಾವವಿಲ್ಲದೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ

ಮಂಡ್ಯದ ಜನತೆಗೆ ಕರಾವಳಿಯ ಬಂಧುವೊಬ್ಬ ಬರೆದ ಪತ್ರ

ಮಂಗಳೂರಿನಿಂದ ಶ್ರೀ ಎಂ. ಜಿ. ಹೆಗಡೆ ಯವರು ನಮಗೆ, ಅಂದರೆ ಮಂಡ್ಯ ಜಿಲ್ಲೆಯವರಿಗೆ ತಮ್ಮ ಅನುಭವದ ಹಿನ್ನೆಲೆಯಲ್ಲಿ ಬರೆದ ಪತ್ರ ಇಲ್ಲಿದೆ. ದಯಮಾಡಿ ಶಾಂತಚಿತ್ತರಾಗಿ ಓದಿ. ಯಾರದೋ ದಾಳಕ್ಕೆ ನಮ್ಮ ನಿಮ್ಮ ಮಕ್ಕಳು ಬಲಿಯಾಗುವುದು ಬೇಡ. ವಿವೇಕದಿಂದ  ವರ್ತಿಸೋಣ. ಸಕ್ಕರೆ ನಾಡಿನ

ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು

1987ರಲ್ಲಿ ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು. ಅದರಲ್ಲೂ ಆ ಕೃತಿಯ ‘ರಾಮ-ಕೃಷ್ಣರ ಒಗಟುಗಳು’ ಭಾಗ. ಮಹಾರಾಷ್ಟ್ರದಲ್ಲಂತೂ 1988ರ ಜನವರಿಯಲ್ಲಿ ಆ ಕೃತಿಯನ್ನೇ ಸುಟ್ಟು ಹಾಕಿದ್ದರು. ಆ ಸಂದರ್ಭದಲ್ಲಿ ಕನ್ನಡದ ಓದುಗರಿಗೂ ಆ ಕೃತಿ

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹೇಳಿರುವ Educate, Unite ಮತ್ತು Agitate ಪದಗಳ ಅರ್ಥವೇನು?

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕುರಿತು ಮಾತನಾಡುವ ಬಹುತೇಕರು ಅವರು ಹೇಳಿರುವ Educate, Unite ಮತ್ತು Agitate ಪದಗಳನ್ನು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂದು ವಿವರಿಸಿದ್ದಾರೆ. ಆರಂಭದಲ್ಲಿ ಅಂಬೇಡ್ಕರ್ ಅವರ ಚಿಂತನೆಯನ್ನು ಸೂತ್ರ ರೂಪದಲ್ಲಿ ಸರಳವಾಗಿ ವಿವರಿಸುವ ಸಲುವಾಗಿ ಶಿಕ್ಷಣ, ಸಂಘಟನೆ