October 1, 2023 7:46 am

ಭಾರತೀಯ ಸಂಸ್ಕೃತಿ ಎಂದರೆ ಏನು?

ಬಿ.ಜೆ.ಪಿ.ಯ ಕರ್ನಾಟಕ ಉಸ್ತುವಾರಿಯಾಗಿರುವ ಅರುಣ್ ಸಿಂಗ್ ಅವರು ಬೆಳಗಾವಿಯ ಉಪ ಚುನಾವಣೆ ಪ್ರಚಾರದಲ್ಲಿ ‘ಸತೀಶ್ ಜಾರಕಿಹೊಳಿಯವರು ಭಾರತೀಯ ಸಂಸ್ಕೃತಿಯನ್ನು ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಚುನಾವಣಾ ಸಮಯದಲ್ಲಿ ಟೀಕೆ, ವಿರೋಧಗಳೆಲ್ಲ ಸಹಜ. ಆದರೆ ಅರುಣ್ ಸಿಂಗ್ ಅವರು ಈ ಮಟ್ಟದ ಹತಾಶೆಯ ಹೇಳಿಕೆ ನೀಡಿದ್ದು, ಅವರ ಅಸಹಾಯಕತೆಯನ್ನು ತೋರಿಸುತ್ತದೆ.

ವಾಸ್ತವದಲ್ಲಿ ಅರುಣ ಸಿಂಗ್ ಅವರಿಗೆ ನಮ್ಮ ಚಟುವಟಿಕೆಗಳ ಹಾಗೂ ಕರ್ನಾಟಕದ ಇತಿಹಾಸದ ಅರಿವು ಇದ್ದಂತಿಲ್ಲ. ಬಸವಣ್ಣನವರ ಲಿಂಗಾಯತ ತತ್ವದ ತಿಳುವಳಿಕೆ ಕೂಡ ಇದ್ದಂತಿಲ್ಲ. ಸರ್ವ ಜನರ ಹಿತಕ್ಕಾಗಿ ಲಿಂಗಾಯತ ತತ್ವ ಚಿಂತನೆಗಳನ್ನು ಬಿತ್ತಿದ ಬಸವಣ್ಣ ನಮ್ಮ ನಾಡಿನ ಸಕಲ ಜನರ ಸದಾಕಾಲದ ಆದರ್ಶ.

ನಮ್ಮ ಪ್ರತಿ ಕಾರ್ಯಕ್ರಮಗಳಲ್ಲೂ ಈ ತತ್ವಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮ ವೇದಿಕೆಗಳನ್ನು ಗಮನಿಸಿದ್ದವರಿಗೆ ವೇದಿಕೆಯ ಮೇಲಿದ್ದ ವ್ಯಕ್ತಿಗಳು ಯಾರು, ಅವರು ಮಾತನಾಡಿದ ವಿಷಯಗಳೇನು ಎಂಬುದು ಎಲ್ಲರಿಗೂ ಗೊತ್ತಿರುತ್ತದೆ. ಅವರು ಮಾತನಾಡಿದ್ದೆಲ್ಲವೂ ಬಸವಣ್ಣನವರ ಲಿಂಗಾಯತ ತತ್ವಗಳ ಆದರ್ಶದ ಕುರಿತು. ವೇದಿಕೆಯಲ್ಲಿ ಹೆಚ್ಚು ಕಾಣಿಸಿಕೊಂಡದ್ದು ಕೂಡ ಲಿಂಗಾಯತ ಮಠಾಧೀಶರು ಮತ್ತು ಚಿಂತಕರು.

ಬಸವ ಮಾರ್ಗದಲ್ಲಿ ಸಾಗುವುದು ಹೇಗೆ ಭಾರತೀಯ ಸಂಸ್ಕೃತಿಯ ವಿರೋಧವಾಗುತ್ತದೆ ಎಂದು ಸಂಸ್ಕೃತಿಯನ್ನು ಗುತ್ತಿಗೆ ಪಡೆದಂತೆ ಭ್ರಮೆಯಲ್ಲಿರುವ ಅರುಣ್ ಸಿಂಗ್ ಅವರೇ ಹೇಳಬೇಕು. ಲಿಂಗಾಯತ ತತ್ವಗಳ ಕುರಿತು ಮಾತನಾಡುವುದು ನಿಮ್ಮ ಸಂಸ್ಕೃತಿಗೆ ವಿರೋಧ ಎಂದಾದರೇ ನಿಮ್ಮದು ಯಾವ ಸಂಸ್ಕೃತಿ? ಕರ್ನಾಟಕ ನೆಲದ ವಿಶ್ವ ಮಾನ್ಯ ಚಿಂತನೆಗಳಾದ ಬಸವಣ್ಣನ ವಿಚಾರಗಳೇ ನಮಗೆ ಮಾರ್ಗದರ್ಶಿ. ನಮ್ಮದು ಅಚಲ ಬಸವ ಮಾರ್ಗ.

ಕರ್ನಾಟಕ ನೆಲದಲ್ಲಿ ನಿಂತು ಮಾತನಾಡುವ ಮುನ್ನ ಹನ್ನೆರಡನೇ ಶತಮಾನದಲ್ಲಿ ಈ ನಾಡಿನಲ್ಲಿ ಮೂಡಿಬಂದ ವಚನ ಚಳುವಳಿಯ ಬಗ್ಗೆ ತಿಳಿದುಕೊಂಡು, ನೀವು ಯಾರಿಗೆ ಅವಮಾನ ಮಾಡುತ್ತಿದ್ದೀರಿ ಎಂದು ಅರಿತು ಮಾತನಾಡುವುದು ಒಳ್ಳೆಯದು. ಅರುಣ್ ಸಿಂಗ್ ಅವರು ಭಾರತೀಯ ಸಂಸ್ಕೃತಿ ಎಂದರೆ  ನಾಗಪುರದ ತಮ್ಮ ಕೇಂದ್ರ ಕಛೇರಿಯಿಂದ  ನಿರ್ದೇಶಿತ ಸಂಸ್ಕೃತಿ ಮಾತ್ರ ಎಂದು ಭ್ರಮಿಸಿದಂತಿದೆ‌.

  • ಮಹಾಲಿಂಗಪ್ಪ ಆಲಬಾಳ

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು