March 29, 2023 9:46 pm

ಭಾರತೀಯ ಸಂಸ್ಕೃತಿ ಎಂದರೆ ಏನು?

ಬಿ.ಜೆ.ಪಿ.ಯ ಕರ್ನಾಟಕ ಉಸ್ತುವಾರಿಯಾಗಿರುವ ಅರುಣ್ ಸಿಂಗ್ ಅವರು ಬೆಳಗಾವಿಯ ಉಪ ಚುನಾವಣೆ ಪ್ರಚಾರದಲ್ಲಿ ‘ಸತೀಶ್ ಜಾರಕಿಹೊಳಿಯವರು ಭಾರತೀಯ ಸಂಸ್ಕೃತಿಯನ್ನು ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಚುನಾವಣಾ ಸಮಯದಲ್ಲಿ ಟೀಕೆ, ವಿರೋಧಗಳೆಲ್ಲ ಸಹಜ. ಆದರೆ ಅರುಣ್ ಸಿಂಗ್ ಅವರು ಈ ಮಟ್ಟದ ಹತಾಶೆಯ ಹೇಳಿಕೆ ನೀಡಿದ್ದು, ಅವರ ಅಸಹಾಯಕತೆಯನ್ನು ತೋರಿಸುತ್ತದೆ.

ವಾಸ್ತವದಲ್ಲಿ ಅರುಣ ಸಿಂಗ್ ಅವರಿಗೆ ನಮ್ಮ ಚಟುವಟಿಕೆಗಳ ಹಾಗೂ ಕರ್ನಾಟಕದ ಇತಿಹಾಸದ ಅರಿವು ಇದ್ದಂತಿಲ್ಲ. ಬಸವಣ್ಣನವರ ಲಿಂಗಾಯತ ತತ್ವದ ತಿಳುವಳಿಕೆ ಕೂಡ ಇದ್ದಂತಿಲ್ಲ. ಸರ್ವ ಜನರ ಹಿತಕ್ಕಾಗಿ ಲಿಂಗಾಯತ ತತ್ವ ಚಿಂತನೆಗಳನ್ನು ಬಿತ್ತಿದ ಬಸವಣ್ಣ ನಮ್ಮ ನಾಡಿನ ಸಕಲ ಜನರ ಸದಾಕಾಲದ ಆದರ್ಶ.

ನಮ್ಮ ಪ್ರತಿ ಕಾರ್ಯಕ್ರಮಗಳಲ್ಲೂ ಈ ತತ್ವಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮ ವೇದಿಕೆಗಳನ್ನು ಗಮನಿಸಿದ್ದವರಿಗೆ ವೇದಿಕೆಯ ಮೇಲಿದ್ದ ವ್ಯಕ್ತಿಗಳು ಯಾರು, ಅವರು ಮಾತನಾಡಿದ ವಿಷಯಗಳೇನು ಎಂಬುದು ಎಲ್ಲರಿಗೂ ಗೊತ್ತಿರುತ್ತದೆ. ಅವರು ಮಾತನಾಡಿದ್ದೆಲ್ಲವೂ ಬಸವಣ್ಣನವರ ಲಿಂಗಾಯತ ತತ್ವಗಳ ಆದರ್ಶದ ಕುರಿತು. ವೇದಿಕೆಯಲ್ಲಿ ಹೆಚ್ಚು ಕಾಣಿಸಿಕೊಂಡದ್ದು ಕೂಡ ಲಿಂಗಾಯತ ಮಠಾಧೀಶರು ಮತ್ತು ಚಿಂತಕರು.

ಬಸವ ಮಾರ್ಗದಲ್ಲಿ ಸಾಗುವುದು ಹೇಗೆ ಭಾರತೀಯ ಸಂಸ್ಕೃತಿಯ ವಿರೋಧವಾಗುತ್ತದೆ ಎಂದು ಸಂಸ್ಕೃತಿಯನ್ನು ಗುತ್ತಿಗೆ ಪಡೆದಂತೆ ಭ್ರಮೆಯಲ್ಲಿರುವ ಅರುಣ್ ಸಿಂಗ್ ಅವರೇ ಹೇಳಬೇಕು. ಲಿಂಗಾಯತ ತತ್ವಗಳ ಕುರಿತು ಮಾತನಾಡುವುದು ನಿಮ್ಮ ಸಂಸ್ಕೃತಿಗೆ ವಿರೋಧ ಎಂದಾದರೇ ನಿಮ್ಮದು ಯಾವ ಸಂಸ್ಕೃತಿ? ಕರ್ನಾಟಕ ನೆಲದ ವಿಶ್ವ ಮಾನ್ಯ ಚಿಂತನೆಗಳಾದ ಬಸವಣ್ಣನ ವಿಚಾರಗಳೇ ನಮಗೆ ಮಾರ್ಗದರ್ಶಿ. ನಮ್ಮದು ಅಚಲ ಬಸವ ಮಾರ್ಗ.

ಕರ್ನಾಟಕ ನೆಲದಲ್ಲಿ ನಿಂತು ಮಾತನಾಡುವ ಮುನ್ನ ಹನ್ನೆರಡನೇ ಶತಮಾನದಲ್ಲಿ ಈ ನಾಡಿನಲ್ಲಿ ಮೂಡಿಬಂದ ವಚನ ಚಳುವಳಿಯ ಬಗ್ಗೆ ತಿಳಿದುಕೊಂಡು, ನೀವು ಯಾರಿಗೆ ಅವಮಾನ ಮಾಡುತ್ತಿದ್ದೀರಿ ಎಂದು ಅರಿತು ಮಾತನಾಡುವುದು ಒಳ್ಳೆಯದು. ಅರುಣ್ ಸಿಂಗ್ ಅವರು ಭಾರತೀಯ ಸಂಸ್ಕೃತಿ ಎಂದರೆ  ನಾಗಪುರದ ತಮ್ಮ ಕೇಂದ್ರ ಕಛೇರಿಯಿಂದ  ನಿರ್ದೇಶಿತ ಸಂಸ್ಕೃತಿ ಮಾತ್ರ ಎಂದು ಭ್ರಮಿಸಿದಂತಿದೆ‌.

  • ಮಹಾಲಿಂಗಪ್ಪ ಆಲಬಾಳ

Share:

Leave a Reply

Your email address will not be published. Required fields are marked *

More Posts

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ

On Key

Related Posts

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಭಕ್ತಿ ಪಂಥ ‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ