March 29, 2023 10:03 pm

ಸತೀಶ್ ಜಾರಕಿಹೊಳಿಯವರ ಗೆಲುವು ರಾಜಕೀಯದ ದಿಕ್ಕನ್ನು ಬದಲಿಸಲಿದೆ

ಬೆಳಗಾವಿ ಲೋಕಸಭಾ ಕ್ಷೇತ್ರದ ಬಂಧುಗಳೇ,
ಒಂದು ಕೆಟ್ಟ ಘಟನೆಯ ಕಾರಣಕ್ಕೆ ಅನಿವಾರ್ಯವಾಗಿ ಮತ್ತೊಂದು ಚುನಾವಣೆಯನ್ನು ಎದುರಿಸುವ ಸ್ಥಿತಿ ಬಂದಿದೆ. ಸನ್ಮಾನ್ಯ ಸತೀಶ ಜಾರಕಿಹೊಳಿಯವರೂ ಕೂಡ ಸ್ಪರ್ಧಿಸಿದ್ದಾರೆ. ನಾಡಿನ ಜನ ಕುತೂಹಲದಿಂದ ಚುನಾವಣೆಯನ್ನು ಗಮನಿಸುತ್ತಿದ್ದಾರೆ ಮತ್ತು ರಾಜ್ಯದ ಬೇರೆ ಬೇರೆ ಭಾಗಗಳಿಂದ ಮಾತ್ರವಲ್ಲ, ದೇಶವಿದೇಶಗಳಿಂದಲೂ ಜನ ಸತೀಶ ಜಾರಕಿಹೊಳಿಯವರು ಗೆಲ್ಲಬೇಕೆಂದು ಬಯಸಿ ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ.
ಕಾರಣವಿಷ್ಟೇ, ಸತೀಶ ಜಾರಕಿಹೊಳಿಯವರ ವ್ಯಕ್ತಿತ್ವ, ನಡೆನುಡಿ, ಜನರ ಬಗೆಗಿನ ಪ್ರಾಮಾಣಿಕ ಕಾಳಜಿ ಮತ್ತು ಅವರ ನಿಲುವುಗಳು. ಜನರ ಬಗೆಗಿನ ಅವರ ಬದ್ಧತೆಯನ್ನು ಎಂಥ ಸಂದರ್ಭ ಕೂಡ ಬದಲಿಸಲಾಗದು. ಜನರಪರ, ಬಡವರಪರ, ದೀನದಲಿತರ ಪರ ಅವರ ಹೋರಾಟ ಇತಿಹಾಸವನ್ನು ಸೃಷ್ಠಿಸುವಂಥದ್ದು. ಬುದ್ಧ, ಬಸವ, ಅಂಬೇಡ್ಕರರ ಚಿಂತನೆಗಳ ಬಗೆಗಿನ ಅವರ ನಿಷ್ಠೆ ಅಚಲವಾದುದು.
ನಾನು ಈ ಕ್ಷೇತ್ರದ ಮತದಾರನಲ್ಲ. ಆದರೆ ನಾನು ಸತೀಶ ಜಾರಕಿಹೊಳಿಯವರ ತಂಡದ ಸದಸ್ಯ. ಅವರನ್ನು ಹತ್ತಿರದಲ್ಲಿದ್ದು ಗಮನಿಸುತ್ತಿದ್ದೇನೆ. ಈ ನಾಡು ಇಂಥ ಅಪರೂಪದ ರಾಜಕಾರಣಿಯನ್ನು ಪಡೆದಿರುವುದು ನಮ್ಮೆಲ್ಲರ ಹೆಮ್ಮೆ ಎಂದೇ ಭಾವಿಸಿಕೊಂಡವನು. ಎಂಥ ಸಂದರ್ಭದಲ್ಲೂ ಅವರು ತಾವೂ ನಂಬಿದ ತತ್ವಗಳಿಂದ ವಿಮುಖರಾಗದೇ ಎದುರಿಸುವುದನ್ನು ಕಂಡು ಆಶ್ಚರ್ಯಗೊಂಡಿದ್ದೇನೆ. ತಾವು ನಂಬಿರುವ ತತ್ವಗಳಿಂದಲೇ ಸವಾಲುಗಳನ್ನು ಎದುರಿಸುವುದನ್ನು ಕಂಡಿದ್ದೇನೆ. ಏನನ್ನಾದರೂ ಕಳೆದುಕೊಳ್ಳುವುದಕ್ಕೂ ಹೆದರದೇ ಮಾನವೀಯತೆಗೆ ಕಟಿಬದ್ಧರಾಗಿ ನಿಂತದ್ದನ್ನು, ಜನರಿಗಾಗಿ ಅವರು ತೆಗದುಕೊಳ್ಳುವ ರಿಸ್ಕ್ ಗಳನ್ನು ನೋಡಿದ್ದೇನೆ. ಸಂವಿಧಾನದ ಬಗೆಗೆ ಅವರ ನಂಬಿಕೆ ಅಪಾರವಾದುದು.
ಸರಳತೆ, ಸದಾ ಸಾಮಾನ್ಯ ಜನರೊಂದಿಗೆ ಇರುವ ಅವರ ಪರ ನಿಲ್ಲುವ ಜನಪರ ನಾಯಕತ್ವ, ಜನರ ಮೇಲೆ ಇಡುವ ಅವರ ನಂಬಿಕೆ ಇವೆಲ್ಲ ಅವರನ್ನು ವಿಭಿನ್ನ ವ್ಯಕ್ತಿತ್ವದ ರಾಜಕಾರಣಿಯನ್ನಾಗಿಸಿದೆ.
ಸತೀಶ ಜಾರಕಿಹೊಳಿಯವರ ಜನಪರ ಕೆಲಸಗಳನ್ನು ಪಟ್ಟಿ ಮಾಡುವುದು ಕಷ್ಟ. ಅವರು ಮಾನವ ಬಂಧುತ್ವ ವೇದಿಕೆ ಮೂಲಕ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದ್ದಾರೆ. ಸ್ಮಶಾನದಲ್ಲಿ ನಡೆಸುವ ಮೌಢ್ಯ ವಿರೋಧಿ ಕಾರ್ಯಕ್ರಮವಂತೂ ದೇಶದ ಗಮನ ಸೆಳೆಯುವಂಥದ್ದು. ಬಡ ಮಕ್ಕಳ ಶಿಕ್ಷಣ, ಆರೋಗ್ಯ, ಉದ್ಯೋಗ, ಬದುಕಿನ ಬಗ್ಗೆ ಇವರಿಗಿರುವ ಕಾಳಜಿಪೂರಿತ ದೃಷ್ಟಿಕೋನ ಈಗಿನ ರಾಜಕಾರಣಿಗಳಲ್ಲಿ ವಿರಳ.
ಚುನಾವಣೆಗಳಲ್ಲೂ ಜನರನ್ನು ಭ್ರಷ್ಟಗೊಳಿಸಬಾರದೆಂಬ ಅವರ ಕಾಳಜಿ ಪ್ರಜಾತಂತ್ರದ ಮೇಲಿನ ಅವರ ನಂಬಿಕೆಗೆ ಸಾಕ್ಷಿ.
ಈ ಚುನಾವಣೆಯಲ್ಲೂ ಆ ವಿಚಾರದಿಂದ ಕದಲುವ ಮಾತಿಲ್ಲ.
ತಮ್ಮ ನಡಿಗೆಯ ಮೇಲಿನ ನಂಬಿಕೆ, ಜನರ ಮೇಲಿನ ವಿಶ್ವಾಸ, ಸಂವಿಧಾನದ ಮೇಲಿನ ಬದ್ಧತೆ, ಬದಲಾವಣೆಯ ಆಶಯಗಳೊಂದಿಗೆ ಮತ್ತೆ ಸವಾಲನ್ನು ಎದುರಿಸಲು ಸಜ್ಜಾಗಿದ್ದಾರೆ.
ಬೆಳಗಾವಿ ಲೋಕಸಭಾ ಉಪಚನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಹಣ, ಹೆಂಡ, ಆಸೆ, ಆಮಿಶಗಳಿಂದ ಈ ಚುನಾವಣೆಯನ್ನು ಎದುರಿಸುವುದಿಲ್ಲ. ಸಂವಿಧಾನದ ತತ್ವಗಳು, ಜನರ ವಿಶ್ವಾಸವೇ ಮುಖ್ಯ ಎಂದು ಮತ್ತೊಮ್ಮೆ ಜನರ ಮುಂದೆ ನಿಂತಿದ್ದಾರೆ. ಅಬ್ಬರವಿಲ್ಲ, ಆಡಂಬರವಿಲ್ಲ.
ಇದರ ಗೆಲುವು ಅಥವಾ ಸೋಲು ಅವರ ನಿಲುವಿನಲ್ಲಾಗಲಿ, ಅವರ ಬದುಕಿನಲ್ಲಾಗಲಿ, ರಾಜಕೀಯದಲ್ಲಾಗಲಿ ಯಾವುದೇ ಬದಲಾವಣೆ ತರಲಾರದು. ಆದರೆ ಅವರ ಗೆಲುವು ಈ ನಾಡಿನ ಜನಪರ ದನಿಗಳ ಗೆಲುವಾಗಲಿದೆ. ಜನವಿರೋಧಿ, ಕ್ರೂರ, ಹಿಂಸಾತ್ಮಕ ರಾಜಕಾರಣದ ವಿರುದ್ಧ ಮಾನವೀಯ, ಜನಪರ ರಾಜಕಾರಣದ ಗೆಲುವಾಗಲಿದೆ. ಇದು ಜನರ ಗೆಲುವು. ಅದನ್ನು ಸಾಧಿಸಿ ತೋರಿಸಿ ತಾವು ಗೆಲ್ಲುವುದು ಬೆಳಗಾವಿ ಲೋಕಸಭಾ ಕ್ಷೇತ್ರದ ಮತದಾರರ ಕೈಯಲ್ಲಿದೆ.
ಪ್ರಜಾ ಪ್ರಭುತ್ವದಲ್ಲಿ ಜನರೇ ಗೆಲ್ಲಬೇಕು. ಅದಕ್ಕಾಗಿ ಸತೀಶ ಜಾರಕಿಹೊಳಿಯವರು ಗೆಲ್ಲಬೇಕು.
ಮುಂದಿನ ರಾಜಕೀಯದ ದಿಕ್ಕನ್ನು ಬದಲಿಸೋಣ. ಅದರ ಜವಾಬ್ದಾರಿ ನಮ್ಮದು.

                    - ಮಹಾಲಿಂಗಪ್ಪ ಆಲಬಾಳ, ಸಾಮಾಜಿಕ ಹೋರಾಟಗಾರರು

Share:

Leave a Reply

Your email address will not be published. Required fields are marked *

More Posts

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ

On Key

Related Posts

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಭಕ್ತಿ ಪಂಥ ‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ