October 1, 2023 7:29 am

ವೈಜ್ಞಾನಿಕ ಜೀವನ ಮಾರ್ಗವೇ ಬಡತನ, ದಾರಿದ್ರ್ಯ ಹೋಗಲಾಡಿಸುತ್ತದೆ: ರವೀಂದ್ರ ನಾಯ್ಕರ್

ಮಾನವ ಬಂಧುತ್ವ ವೇದಿಕೆ, ಕರ್ನಾಟಕ ವತಿಯಿಂದ ಇಂದು ಘಟಪ್ರಭಾದ ಸೇವಾದಳದಲ್ಲಿ ಕಚೇರಿಯಲ್ಲಿ ವಿಶ್ವ ಮಾನವ ದಿನಾಚರಣೆಯನ್ನು ಆಚರಿಸಲಾಯಿತು. ಕುವೆಂಪುರವರ 117ನೆ ಜನ್ಮ ದಿನವಾದ ಇಂದು ಅವರಿಗೆ ನುಡಿ ನಮನ ಸಲ್ಲಿಸಲಾಯಿತು.


ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್ ಅವರು ಮಾತನಾಡಿ,  ಕುವೆಂಪುರವರು ಆಧ್ಯಾತ್ಮ ಜೀವಿಯಾಗಿದ್ದರು. ಕರುನಾಡಿನಲ್ಲಿ ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದರ ವಿಚಾರಧಾರೆಗಳನ್ನು ಪ್ರಸಾರಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದರು ಎಂದರು.

ಮೌಢ್ಯವನ್ನು ನಿವಾರಿಸುವಲ್ಲಿ ವೈಜ್ಞಾನಿಕ ಆಲೋಚನೆಗಳನ್ನು ಬಿತ್ತಿದ ಕುವೆಂಪು ನೇಗಿಲ ಗೆರೆಯಲ್ಲಿ ದೈವ ಕಾಣುವಂತೆ ಶ್ರಮಜೀವಿವರ್ಗಕ್ಕೆ ಕರೆಕೊಟ್ಟರು. ನಮ್ಮ ಶ್ರಮದಿಂದ ಸಂಪಾದಿಸಿದ ಹಣ ವ್ಯರ್ಥವಾಗಿ ದೇವರ ಹುಂಡಿ ಮತ್ತು ಪೂಜಾರಿಯ ಪಾಲಾಗಬಾರದು. ಅದು ನಮ್ಮ‌ ಅಭಿವೃದ್ಧಿಗೆ, ನಮ್ಮ ಏಳಿಗೆಗೆ ಉಪಯೋಗವಾಗಬೇಕೆಂಬ ಚಿಂತನೆಯನ್ನು ಕುವೆಂಪು ಕೊಟ್ಟರು ಎಂದರು.

ಮೌಢ್ಯದಿಂದ ಹೊರ ಬರದ ಹೊರತು ಅಭಿವೃದ್ಧಿ ಇಲ್ಲ. ವೈಜ್ಞಾನಿಕ ಜೀವನ ಮಾರ್ಗವೇ ನಮ್ಮ ಬಡತನ, ದಾರಿದ್ರ್ಯವನ್ನು ಹೋಗಲಾಡಿಸುತ್ತದೆ ಎನ್ನುವ ಮೂಲಕ ಕುವೆಂಪುರವರ ಚಿಂತನೆಗಳೇ ಸಮಾಜದಲ್ಲಿ ಮೇಲ್ಪಂಕ್ತಿಯಾಗಬೇಕು ಎಂದರು.

ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಸಂಚಾಲಕ ಮಹಲಿಂಗಪ್ಪ ಆಲಬಾಳ ಅವರು ಮಾತನಾಡಿ, ಕುವೆಂಪುರವರ ವಿಚಾರಗಳ ಅಡಿಪಾಯದ ಮೇಲೆಯೇ ಮಾನವ ಬಂಧುತ್ವ ವೇದಿಕೆ ಮುನ್ನಡೆಯುತ್ತಿದೆ. ಕುವೆಂಪು ತತ್ವವೇ ನಮ್ಮ ಆಧಾರಸ್ತಂಭವಾಗಿದ್ದು ಮೌಢ್ಯದ ವಿರುದ್ಧದ ನಮ್ಮ ಹೋರಾಟದ ಬಹು ದೊಡ್ಡ ಪ್ರೇರಣೆಯೂ ಆಗಿದ್ದಾರೆ. ಕುವೆಂಪು ಸಾರ್ವಕಾಲಿಕವಾಗಿ ಜನದನಿಯಾಗಿ ಜೀವಂತವಿರುವ ಕವಿ ಎಂದರು.

ಉಪನ್ಯಾಸಕ ಸುರೇಶ ಎನ್ ಶಿಕಾರಿಪುರ ಮಾತನಾಡಿ, ಕುವೆಂಪು ಏಕೆ ಮತ್ತು ಹೇಗೆ ಜಗದ ಕವಿ ಯುಗದ ಕವಿ ಕಾಡು ನಾಡು ಮತ್ತು ರೈತ ಕವಿ ಆಗುತ್ತಾರೆ ಎಂದು ಹೇಳುತ್ತಾ, ಗುಡಿ ಚರ್ಚು ಮಸೀದಿಗಳನ್ನು ಬಿಟ್ಟು ಹೊರಬಂದು ವೈಜ್ಞಾನಿಕ ಬದುಕಿನ ಮೂಲಕ ಮನುಷ್ಯರೆಲ್ಲರೂ ಸಮಾನರಾಗಿ ಬದುಕಬೇಕು ಹಾಗೂ ಶಿವ ಅಥವ ನಾವು ನಂಬುವ ದೇವರು ನಮ್ಮ ಪ್ರಾಮಾಣಿಕ ಕೆಲಸ ಕಾರ್ಯ ಬದುಕುವ ಬದುಕಿನಲ್ಲೇ ಇದ್ದಾನೆಂದು ಕುವೆಂಪುರವರು ಸಾರಿದರು ಎಂದರು. 

ಕಲಾವಿದ, ಹೋರಾಟದ ಹಾಡುಗಾರ ಆಂಜಿನಪ್ಪ ಲೋಕಿಕೆರೆ ಅವರು ಕುವೆಂಪುರವರ ‘ಬಾರಿಸು ಕನ್ನಡ ಡಿಂಡಿಮವ’ ಮತ್ತು ‘ನೇಗಿಲಯೋಗಿ’ ಪದ್ಯಗಳನ್ನು ಹಾಡಿ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು.

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು